ಹೊನ್ನಾವರ: ತಾಲೂಕಿನಲ್ಲಿ ಕೊಂಚ ನಿರಾಳತೆ ಪಡೆದಿದ್ದ ಕರೋನಾ ಮತ್ತೆ ಅಟ್ಟಹಾಸ ಮುಂದುವರೆದಿದ್ದು, ಬುಧವಾರ ಒಂದೇ ದಿನ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಎಲ್ಲರೂ ಮಹಾರಾಷ್ಟçದಿಂದ ಆಗಮಿಸಿದವರಾಗಿದ್ದು ಖಾಸಗಿ ಹೊಟೇಲ್ನಲ್ಲಿ ಕ್ವಾರಂಟೈನ್ನಲ್ಲಿದ್ದವರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ
ಖರ್ವಾ ಮೂಲದ ೪೨ ವರ್ಷದ ವ್ಯಕ್ತಿ, ಸಂಶಿಯ ಕುದ್ರಿಗಿ ಮೂಲದ ೬೭ ವರ್ಷದ ಮಹಿಳೆ ಹಾಗೂ ಆಕೆಯ ಪತಿ ೭೮ ವರ್ಷದ ವ್ಯಕ್ತಿ ಮತ್ತು ತುಳಸಿನಗರದ ೩೩ ವರ್ಷದ ಮಹಿಳೆಯಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಎಲ್ಲರೂ ಜೂನ್ ೧೬ ರಂದು ಮಹರಾಷ್ಟçದಿಂದ ಆಗಮಿಸಿದವರಾಗಿದ್ದು ಖಾಸಗಿ ಹೊಟೇಲ್ನಲ್ಲಿ ಕ್ವಾರಂಟೈನ್ ಆಗಿದ್ದರು.
ಬುಧವಾರದ ನಾಲ್ಕು ಪ್ರಕರಣದೊಂದಿಗೆ ತಾಲೂಕಿನ ಸೋಂಕಿತರ ಸಂಖ್ಯೆ ೧೯ ಕ್ಕೆ ಏರಿಕೆಯಾಗಿದ್ದು ಎಲ್ಲರೂ ಮುಂಬೈ ಮಹಾರಾಷ್ಟçದಿಂದ ವಾಪಸ್ಸಾದವರೇ ಆಗಿದ್ದಾರೆ. ಕ್ವಾರಂಟೈನ್ ಮುಗಿಸಿ ಮನೆಗೆ ಹೋಗಿದ್ದವರಲ್ಲಿ ಪಾಸಿಟಿವ್ ಪತ್ತೆಯಾದ ಒಂದು ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಪ್ರಕರಣದಲ್ಲಿಯೂ ಕ್ವಾರಂಟೈನ್ನಲ್ಲಿದ್ದವರಲ್ಲಿಯೇ ಸೋಂಕು ಪತ್ತೆಯಾಗಿರುವುದರಿಂದ ತಾಲೂಕಿನ ನಿವಾಸಿಗಳ ಆತಂಕವನ್ನು ತಕ್ಕಮಟ್ಟಿಗೆ ತಗ್ಗಿಸುವುದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೆ ಇಂದು ಪತ್ತೆಯಾದ ನಾಲ್ವರ ಸಂಪರ್ಕ ಮಾಡಿದ್ದಾರೆಯೆ ಎನ್ನುವ ಮಾಹಿತಿ ಅಧಿಕಾರಿಗಳು ಕಲೆ ಹಾಕಲಾಗುತ್ತಿದೆ. ಎಲ್ಲರನ್ನು ಲಾಡ್ಜನಿಂದ ಆಸ್ಪತ್ರೆಗೆ ಶಿಪ್ಟ ಮಾಡಲಾಗಿದೆ.
ಇದರೊಟ್ಟಿಗೆ ಜಿಲ್ಲೆಯಲ್ಲಿ ಇಂದು ೯ ಮಂದಿಗೆ ಕೋವಿಡ್- ೧೯ ಸೋಂಕು ದೃಢಪಟ್ಟಿದೆ.
ಕುಮಟಾದ ೪ ಮತ್ತು ಮುಂಡಗೋಡದ ಟಿಬೆಟಿಯನ್ ಕಾಲೊನಿಯ ೪೫ ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜೂ.೧೬ರಂದು ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ೩೦ ವರ್ಷದ ಟಿಬೆಟಿಯನ್ ವ್ಯಕ್ತಿ ಇತ್ತೀಚೆಗಷ್ಟೇ ಟಿಬೆಟಿಯನ್ ಕ್ಯಾರಂಟೈನಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದ. ಆತನನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈತನಿಗೆ ಕೆಲವು ದಿನಗಳ ಸೋಂಕು ದೃಢಪಟ್ಟಿತ್ತು.
ಇನ್ನು, ಇದೇ ಹಾಸ್ಟೆಲ್ನಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಇಂದು ಸೋಂಕು ದೃಢಪಟ್ಟಿರುವುದರಿಂದ, ಈ ಹಾಸ್ಟೆಲ್ನ ೫೪ ಕ್ವಾರಂಟೈನಿಗಳು ಹಾಗೂ ಈಕೆಯ ಮನೆಯಲ್ಲಿನ ನಾಲ್ವರು ಸದಸ್ಯರು, ಒಟ್ಟು ೬೦ ಜನರನ್ನು ಪ್ರಥಮ ಸಂಪರ್ಕವೆAದು ಗುರುತಿಸಲಾಗಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.