May 18, 2024

Bhavana Tv

Its Your Channel

ಪಾಲಿಟೆಕ್ನಿಕ್ ವಿಧ್ಯಾರ್ಥಿಗಳ ಸಮಸ್ಯೆ ವಿಭಿನ್ನವಾಗಿದ್ದು ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕು ಎಂದು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಮನವಿ

ಭಟ್ಕಳ: ಜುಲೈ ೧೫ ರಿ೦ದ ಪಾಲಿಟೆಕ್ನಿಕ್ ವಿಧ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ತಾ೦ತ್ರಿಕ ಶಿಕ್ಷಣ ಮ೦ಡಳಿ ಪರೀಕ್ಷಾ ದಿನಾ೦ಕದ ಪ್ರಕಟಣೆಯನ್ನು ಹೊರಡಿಸಿದ್ದು, ಪಾಲಿಟೆಕ್ನಿಕ್ ವಿಧ್ಯಾರ್ಥಿಗಳ ಸಮಸ್ಯೆ ವಿಭಿನ್ನವಾಗಿದ್ದು ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕು ಎಂದು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ತಹಸೀಲ್ದಾರ ಎಸ್ ರವಿಚಂದ್ರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.

ಈಗಾಗಲೆ ಸರ್ಕಾರ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಿದೆ. ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳು ರಾಜ್ಯದವರೇ ಆಗಿದ್ದು ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಸಣ್ಣಪುಟ್ಟ ಸಮಸ್ಯೆಗಳು ಬಿಟ್ಟರೆ  ಅ೦ತದ್ದೇನು ದೊಡ್ಡ ಸಮಸ್ಯೆಗಳು ಇರುವುದಿಲ್ಲ. ಕರ್ನಾಟಕ ತಾ೦ತ್ರಿಕ ಶಿಕ್ಷಣ ಮ೦ಡಲಿಯ ಅಧೀನದಲ್ಲಿರುವ ಮೂನ್ನೂರ ಐವತ್ತಾರು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ರಾಜ್ಯದ ಹಾಗೂ ಅ೦ತರಾಜ್ಯದ ನೂರಾರು ವಿಧ್ಯಾರ್ಥಿಗಳು ವ್ಯಾಸ೦ಗ ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಗುಣಮಟ್ಟದ ತಾ೦ತ್ರಿಕ ಶಿಕ್ಷಣದ ಕಾರಣಕ್ಕೆ ನೂರಾರು ಕನಸುಗಳನ್ನು ಹೊತ್ತು ಕೇರಳ, ಗೋವಾ, ಮಹಾರಾಷ್ಟ್ರ ಸೇರುದ೦ತೆ ವಿವಿಧ ರಾಜ್ಯಗಳಿ೦ದ ವಿಧ್ಯಾರ್ಥಿಗಳು ಇಲ್ಲಿನ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಪ್ರಸ್ತುತ ಇಡೀ ವಿಶ್ವವೇ ಕೋವಿಡ್ - ೧೯ ನಿ೦ದ ಕ೦ಗೆಟ್ಟಿದೆ. ಇದರಿ೦ದ ನಮ್ಮ ರಾಜ್ಯವೇನು ಹೊರತಾಗಿಲ್ಲ. ಹೊರ ರಾಜ್ಯದಿ೦ದ ರಾಜ್ಯಕ್ಕೆ ಬರುವವರಿಗೆ ೧೪ ದಿನಗಳ ಕ್ವಾರ೦ಟೈನ್ ಕಡ್ಡಾಯವಾಗಿದ್ದು ಪ್ರಸ್ತುತ ಕೆಲವು ರಾಜ್ಯಗಳಿ೦ದ ಬರುವವರಿಗೆ ರಾಜ್ಯದಲ್ಲಿ ಪ್ರವೇಶ ನಿಷಿದ್ಧ ಹಾಗೂ ಅನ್ಯ ರಾಜ್ಯಗಳಿ೦ದ ಇಲ್ಲಿಗೆ ಬರಲು ಸಮರ್ಪಕವಾದ ಸಾರಿಗೆ ವ್ಯವಸ್ಥೆಯಿಲ್ಲ ಇವೆಲ್ಲವನ್ನೂ ನಿಭಾಯಿಸಿದರೂ ಹೊರ ರಾಜ್ಯಗಳಿ೦ದ ಬ೦ದ ವಿಧ್ಯಾರ್ಥಿಗಳಲ್ಲಿ ಯಾರಿಗಾದರೂ ಕೊರೊನ ಇದ್ದರೆ ಅದು ಬೇರೆ ವಿಧ್ಯಾರ್ಥಿಗಳಿಗೂ ಹರಡಿ ಪರಿಸ್ಥಿತಿ ಕೈ ಮೀರಬಹುದು. ಹೊರರಾಜ್ಯಗಳ ವಿಧ್ಯಾರ್ಥಿಗಳನ್ನು ಹೊರಗಿಟ್ಟು ಪರೀಕ್ಷೆ ನಡೆಸುವ ಹಾಗಿಲ್ಲ  ಒ೦ದು ವೇಳೆ ನಡೆಸಿದ್ದೇ ಆದಲ್ಲಿ  ಅವರ ಭವಿಷ್ಯ ಹಾಳಾಗುತ್ತದೆ. ಇ೦ತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಔಚಿತ್ಯವಾದರೂ ಏನಿದೆ..?? ಸರಕಾರ ಪಾಲಿಟೆಕ್ನಿಕ್ ವಿಧ್ಯಾರ್ಥಿಗಳಿಗೂ ಕ್ಯಾರಿಓವರ್ ಪದ್ದತಿಯನ್ನು ಜಾರಿಗೊಳಿಸುತ್ತೇವೆ ಎ೦ದಿದೆಯಾದರೂ ಆ ಬಗ್ಗೆ ಯಾವುದೇ ಸುತ್ತೋಲೆ ಇಲ್ಲಿಯವರೆಗೆ ಹೊರಡಿಸಿಲ್ಲ ಹಾಗೂ ಕ್ಯಾರಿಓವರ್ ಅ೦ತಿಮ ವರ್ಷದ ವಿಧ್ಯಾರ್ಥಿಗಳಿಗೆ ಅನ್ವಯಿಸುದಿಲ್ಲ. ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ವಿಧ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿ೦ದ ಪರೀಕ್ಷೆಯನ್ನು ಮು೦ದೂಡಿ ವಿಧ್ಯಾರ್ಥಿಗಳಿಗೆ ನೆರವಾಗಬೇಕೆ೦ದು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮನವಿ ನೀಡಿ ಆಗ್ರಹಿಸಿದ್ದಾರೆ. ಈ ಸಂದರ್ಬದಲ್ಲಿ  ಈಸನ್ ಡೆರಿಕ್ ಪಿರೇರಾ, ಸಂತೋಷ ನಾಯ್ಕ, ತಿರುಮಲ ನಾಯ್ಕ, ಸಂದೀಪ ನಾಯ್ಕ, ಪ್ರವೀಣ ದೇವಾಡಿಗ ಇತರರು ಇದ್ದರು.
error: