May 19, 2024

Bhavana Tv

Its Your Channel

108 ಆ್ಯಂಬುಲೆನ್ಸ್ ವಾಹನದ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಹೆರಿಗೆ ಯಶ್ವಸಿ ತಾಯಿ ಮಗು ಕ್ಷೇಮ.

ಹೊನ್ನಾವರ : ತಾಲೂಕಿನ ಕೆರೆಕೋಣ ನಿವಾಸಿಯಾದ 28 ವರ್ಷದ ನಾಗರತ್ನ ಜಿ ಮೊಗೇರ ಎನ್ನುವ ಮಹಿಳೆಗೆ ಬುಧವಾರ ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳಿಯರು ಕೂಡಲೆ ಹೊನ್ನಾವರ 108 ಆ್ಯಂಬುಲೆನ್ಸ್ ಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ .ತಕ್ಷಣ 108 ಆ್ಯಂಬುಲೆನ್ಸ್ ಸಿಬ್ಬಂದಿಗಳಾದ ಚಾಲಕ ಯಶೋಧರ ನಾಯ್ಕ ಹಾಗೂ ಶುಶ್ರೂಶಕಿ ಸಂಗೀತಾ ಗೌಡ ಕಾರ್ಯಪ್ರವೃತ್ತರಾಗಿ ಎಂ.ಜಿ. ನಾಗರತ್ನ ಅವರ ಮನೆಗೆ ತೆರಳಿದ್ದರು.ಅದಾಗಲೇ ಹೆರಿಗೆ ನೋವಿನಿಂದ ಕೊನೆಯ ಹಂತಕ್ಕೆ ತಲುಪಿದ್ದ ನಾಗರತ್ನ ಅವರನ್ನು ಆಸ್ಪತ್ರೆಗೆ ಕರೆತರುವುದು ಕಷ್ಟಸಾಧ್ಯ ಎನ್ನುವ ವಿಷಯ ಅರಿತು ಹೀಗಾಗಿ ಮನೆಯಲ್ಲಿಯೇ ಸುಸೂತ್ರವಾಗಿ ಹೆರಿಗೆ ಆಗುವಲ್ಲಿ ಶುಶ್ರೂಷಕಿ ಸಂಗೀತಾ ಅವರು ನೆರವಾಗಿದ್ದಾರೆ.ಈದೀಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು ಹೆಚ್ಚಿನ ಆರೈಕೆಗಾಗಿ ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಈಗಿರುವ ಕೋವಿಡ್ ಪರಿಸ್ಥಿತಿಯಲ್ಲಿ ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಯೂ ಸೇವೆ ನೀಡುತ್ತಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.ಈ ನಡುವೆ ಹೊನ್ನಾವರ 108 ಸಿಬ್ಬಂದಿಯ ಕಾರ್ಯವೈಖರಿಗೆ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

error: