April 25, 2024

Bhavana Tv

Its Your Channel

ಕೆರಮನೆ ರಾಷ್ಟಿçÃಯ ನಾಟೊತ್ಸವಕ್ಕೆ ಗಣ್ಯರಿಂದ ಚಾಲನೆ.

ಕೆರಮನೆ ರಾಷ್ಟಿçÃಯ ನಾಟೊತ್ಸವಕ್ಕೆ ಗಣ್ಯರಿಂದ ಚಾಲನೆ. ಅಗಲಿದ ಹಿರಿಯ ಕಲಾವಿದರಿರ ಸ್ಮರಿಸುವ ಜೊತೆ ಶ್ರೀ ಇಡಗುಂಜಿ ಮೇಳ -೮೫ ಕೃತಿ ಲೋಕಾರ್ಪಣೆ. ಪ್ರಸಿದ್ದ ಚಂಡೆವಾದಕ ಶ್ರೀ ಕೃಷ್ಣ ಯಾಜಿ ಮಾವಿನಕೆರೆ ಇವರಿಗೆ ಕೆರೆಮನೆ ಗಜಾನನ ಹೆಗಡೆ ೨೦೧೯ ಪ್ರಶಸ್ತಿ ಪ್ರಧಾನ.

ಹೊನ್ನಾವರ ತಾಲೂಕಿನ ಗುಣವಂತೆ ಯಕ್ಷಾಂಗಣದಲ್ಲಿ ೧೧ನೇ ವರ್ಷದ ಕೆರಮನೆ ಶಂಭು ಹೆಗಡೆ ರಾಷ್ಟಿçÃಯ ನಾಟೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಗಣ್ಯರಿಂದ ಚಾಲನೆ ನೀಡಲಾಯಿತು.
ಸಾಂಸ್ಕöÈತಿಕ ಬದುಕು ಸಮೃದ್ಧವಾಗಬೇಕಾದರೆ ಸರ್ಕಾರ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಮೂಲಕ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಅನುದಾನವನ್ನು ವಿಶೇಷವಾಗಿ ನೀಡಬೇಕಿದೆ ಆಗ ಮಾತ್ರ ಈ ಕಲೆ ಇನ್ನಷ್ಟು ಕಾಲ ಉಳಿಯಲು ಸಾಧ್ಯ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಹೇಳಿದರು
ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರಗಳು ಭಾರತೀಯ ರಂಗ ಪರಂಪರೆಗೆ ಕೊಡಬೇಕಾದ ಮನ್ನಣೆಯನ್ನು ಕೊಡುತ್ತಿಲ್ಲ. ಈ ಕ್ಷೇತ್ರಕ್ಕೆ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಭಾರತೀಯ ಸಂಸ್ಕೃತಿಯು ಸಾಂಪ್ರದಾಯಿಕ ಕಲೆಗಳಿಂದ ಉಳಿದಿದೆ. ಸಂಸ್ಕೃತಿಯಯನ್ನು ಎತ್ತಿ ಹಿಡಿಯುವ ಸಾಂಪ್ರದಾಯಿಕ ಕಲೆಗಳಿಗೆ ಸರ್ಕಾರವು ಪ್ರೋತ್ಸಾಹ ನೀಡಬೇಕಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಇನ್ನೂ ಸಾಕಷ್ಟು ಕಲಾವಿದರು ಸೂಕ್ತ ತರಬೇತಿಯೊಂದಿಗೆ ಸೃಷ್ಟಿಯಾಗಬೇಕಿz.ೆ ಇದಕ್ಕೆ ಯಕ್ಷಗಾನ ಅಕಾಡೆಮಿ ಪ್ರೋತ್ಸಾಹ ನೀಡುವುದು ಎಂದರು.
ಲೇಖಕ ಮೈಸೂರಿನ ಜಿ.ಎಸ್.ಭಟ್ ಬರೆದ ಇಡಗುಂಜಿ ಮೇಳ ೮೫' ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಮಾತನಾಡಿ ಇಂದು ಪರಿಸರದ ಮೇಲೆ ಹಲವು ಬಗೆಯಲ್ಲಿ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಿ ಪರಿಸರದ ಸಮತೋಲವನ್ನು ಕಾಪಾಡುವಲ್ಲಿ ಪಶ್ಚಿಮ ಘಟ್ಟಗಳು ಸೇರಿದಂತೆ ಹಲವಾರು ಜಾಗತಿಕ ಜೀವ ವೈವಿದ್ಯತೆಯ ತಾಣಗಳು ಪ್ರಮುಖ ಪಾತ್ರವಹಿಸುತ್ತಿವೆ. ಅದೇ ರೀತಿಯಲ್ಲಿ ಆಧುನಿಕ ಜೀವನಶೈಲಿಯಿಂದ ಕಳೆದುಕೊಳ್ಳುತ್ತಿರುವ ನೆಮ್ಮದಿಯನ್ನು ಇಂಥಹ ಕಲಾ ವೈಭವದ ಕೇಂದ್ರಗಳು ಮರಳಿ ನೀಡುತ್ತಿದೆ. ಕಲಾಕೇಂದ್ರಗಳು ಸಮಾಜವನ್ನು ಸುಸ್ಥಿತಿಯಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಹಿರಿಯ ಮದ್ದಲೆವಾದಕ ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಮದ್ದಲೆವಾದಕನಾಗಿ ಬಂದ ನನಗೆ ಹಲವರು ಗುರುಗಳಾಗಿ ಮಾರ್ಗದರ್ಶನ ಮಾಡಿದ್ದಾರೆ. ನನ್ನ ಕಿವಿ ಮತ್ತು ಕೈಗೆ ಶಕ್ತಿ ಇರುವವರೆಗೆ ಈ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ಇಂಡಗುAಜಿ ಮೇಳವು ನಾನು ಕೊಟ್ಟಿದ್ದಕ್ಕಿಂದ ಈ ಮೇಳದಿಂದ ನಾನು ಪಡೆದದ್ದೇ ಹೆಚ್ಚು. ಹಲವು ಕಲಾವಿದರು, ಗಣ್ಯರ ಸಂಪರ್ಕದೊAದಿಗೆ ಪ್ರಶಸ್ತಿ ಸ್ವೀಕರಿಸಿದ ತೃಪ್ತಿಯಿದೆ ಎಂದರು. ಗೋಪಾಲಕೃಷ್ಣ ಹೆಗಡೆ ಕಲಭಾಗ ಅಭಿನಂದನಾ ನುಡಿದರು.ಇಡಗುಂಜಿ ಮೇಳ ೮೫’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಸಾಪ ಅಧ್ಯಕ್ಷ ಪ್ರೊ. ನಾಗರಾಜ ಹೆಗಡೆ ಅಪಗಾಲ ಕೃತಿ ಪರಿಚಯಿಸಿದರು.
ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸಿದರು. ಲೇಖಕ ಜಿ.ಎಸ್.ಭಟ್, ಯಕ್ಷರಂಗದ ಗೋಪಾಲಕೃಷ್ಣ ಭಾಗವತ, ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷಿö್ಮÃನಾರಾಯಣ ಕಾಶಿ ಸ್ವಾಗತಿಸಿದರು. ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು.
ಬೆಂಗಳೂರು ಸಯ್ಯದ್ ಸಲ್ಲಾವುದ್ದೀನ್ ಪಾಷಾರವರ ನಿರ್ದೇಶನ ಮತ್ತು ಕೊರಿಯೋಗ್ರಪಿಯಲ್ಲಿ ಗಾಲಿಖುರ್ಚಿಯಲ್ಲಿ ವಿಶೇಷ ಚೇತನರ ವಿವಿಧ ನಾಟ್ಯ ಪ್ರದರ್ಶನ ನಡೆಯಿತು. ನಂತರ ಕರ್ನಾಟಕ ಕಲಾದರ್ಶಿನಿ (ರಿ), ಬೆಂಗಳೂರು ಇವರಿಂದ ಡಾ. ಕೆ. ಶಿವರಾಮ ಕಾರಂತರ ನಿರ್ದೇಶನ ಹಾಗೂ ವಿದ್ವಾನ್ ಸುಧೀರ ರಾವ್, ಕೊಡವೂರು ಇವರ ನಿರ್ಮಾಣದ ಯಕ್ಷಗಾನ ಬ್ಯಾಲೆ ‘ಅಭಿಮನ್ಯು ವಧೆ’ ಪ್ರಸ್ತುತಿಗೊಂಡಿತು.

error: