ಭಟ್ಕಳ: ಮಂಗಳವಾರ ನಡೆದ ಭಟ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆ ಯಲ್ಲಿ ೧೧ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಪುರುಷರು ವಿಭಾಗದಲ್ಲಿ ಸ್ಪರ್ಧಿಸಿದ ೧೨ ಅಭ್ಯರ್ಥಿಗಳ ಪೈಕಿ ಮುರುಡೇಶ್ವರ ಜನತಾಕಾಲೋನಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ದಿನೇಶ ದೇಶಭಂಡಾರಿ (೩೮೯), ಕೈಕಿಣಿ ಬಿದ್ರಮನೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಉಲ್ಲಾಸ ಸುಬ್ರಾಯ ನಾಯ್ಕ(೩೨೪), ಬೈಲೂರು ಸಣಬಲ್ಸೆಯ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಎಮ್.ಡಿ.ರಫೀಕ್(೨೮೮), ಬೆಳಕೆ ನೂಜ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಾಂತ ಮಂಜು ಕಾಯ್ಕಿಣಿ(೨೭೩), ಬೆಳಕೆ ಕಂಚಿಕೇರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮಂಜುನಾಥ ಎನ್ ನಾಯ್ಕ (೨೫೨), ಜಾಲಿ ಬಬ್ಬನಕಲ್ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಯಶ್ವಂತ ಆರ್ ನಾಯ್ಕ (೨೪೦), ಕೊಪ್ಪ ಗುಂಡ್ಲಕಟ್ಟಾ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮುಂಜುನಾಥ ಹೆಗಡೆ(೨೩೬), ಗರಿಷ್ಠ ಮತಗಳನ್ನು ಪಡೆದು ಆಯ್ಕೆಯಾಗಿದ್ದರೆ, ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿದ ೭ ಅಭ್ಯರ್ಥಿಗಳ ಪೈಕಿ ಸರಕಾರಿ ಹಿರಿಯ ಹೆಣ್ಣುಮಕ್ಕಳ ಶಾಲಾ ಶಿಕ್ಷಕಿ ಪಿ.ಎ. ಗೋಮ್ಸ (೩೬೪), ಮಾವಿನಕುರ್ವೆ ಕರಿಕಲ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ರತ್ನಾಕರ ಶೇಟ (೨೬೮), ಬೆಂಗ್ರೆ ಉಳ್ಮಣ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸುಧಾ ಭಟ್(೨೫೭), ಶಾಸಕರ ಮಾದರಿ ಶಾಲೆಯ ಶಿಕ್ಷಕಿ ಜಯಲಕ್ಷಿö್ಮ ನಾಯ್ಕ(೨೦೫) ಹಿಚ್ಚಿನ ಮತ ಪಡೆದು ಆರಿಸಿ ಬಂದಿದ್ದಾರೆ. ತಾಲೂಕಿನ ವಿವಿಧ ಶಾಲೆಗಳ ಒಟ್ಟೂ ೫೫೦ ಶಿಕ್ಷಕ ಮತದಾರರ ಪೈಕಿ ೫೨೬ ಶಿಕ್ಷಕರ ಚುನಾವಣೆ ಯಲ್ಲಿ ಮತ ಚಲಾಹಿಸಿದ್ದರು ಶಿಕ್ಷಕ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯಲ್ಲಮ್ಮ, ದೈಹಿಕ ಪರಿವೀಕ್ಷಕ ಪ್ರಕಾಶ ಶಿರಾಲಿ , ಅಶೋಕ ಆಚಾರಿ , ದಿ ನ್ಯೂ ಇಂಗ್ಲೀಷ ಸ್ಕೂಲ್ ಶಿಕ್ಷಕ ಸುರೇಶ ತಾಂಡೇಲ್ ಚುನಾವಣಾಧೀಕಾರಿಯಾಗಿ ಭಾಗವಹಿಸಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.