ಭಟ್ಕಳ : ಖಚಿತ ಮಾಹಿತಿ ಮೇರೆಗೆ ಪುರಸಭೆ ವ್ಯಾಪ್ತಿಯ ಬಂದರ ೨ ನೇ ಕ್ರಾಸ್ ನಲ್ಲಿ ಇರುವ ಕೋಗ್ತಿ ಯಲ್ಲಿಮದುವೆ ಛತ್ರ ಯೊಂದರಲ್ಲಿ ಬಾಲಕಿ ಯೋರ್ವಳ ಮದುವೆ
ನಿಶ್ಚಿತಾರ್ಥ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ನಿಶ್ಚಿತಾರ್ಥ ತಡೆದು, ಪಾಲಕರಿಗೆ ಎಚ್ಚರಿಗೆ ನೀಡಿ ಬಳಿಕ ಮುಚ್ಚಳಿಕೆ ಬರೆಸಿಕೊಂಡ ಘಟನೆ ಮಂಗಳವಾರ ತಾಲೂಕಿನಲ್ಲಿ ನಡೆದಿದೆ.
ಡಿ 29ರಂದು 25 ವರ್ಷದ ಅಕ್ಕಿ ಆಲೂರಿನ್ ಯುವಕನ ಜೊತೆ ಅಪ್ರಾಪ್ರ ಯುವತಿಯೋರ್ವಳ ಮದುವೆ ನಿಶ್ಚಿತಾರ್ಥ ನಡೆಸಲು ತಯಾರಿ ನಡೆಯುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿ ಗಂಗಾ ಗೌಡ, ಕುಸುಮಾ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ,
ರೇಖಾ,ಕಾರವಾರ ಮಕ್ಕಳ ಶಿಕ್ಷಣ ಘಟಕದ ಅಧಿಕಾರಿಗಳಾದ ಸ್ನೇಹ ಗುನಗಿ,ಸುನೀಲ್ ಗಾವಂಕರ,ನಗರ ಠಾಣೆಯ ಮಹಿಳಾ ಪೋಲಿಸ್ ಸಿಬ್ಬಂದಿಯಾದ ಜಯಶ್ರೀ ಹರಿಕಾಂತ ಸ್ಥಳಕ್ಕೆ ತೆರಳಿದ್ದಾರೆ.ದಾಖಲೆ ಪ್ರಕಾರ ಬಾಲಕಿಯ ವಯಸ್ಸು ಇನ್ನು 18 ದಾಟದ ಕಾರಣ ನಡೆಯುತ್ತಿದ್ದ ವಿವಾಹ ನಿಶ್ಚಿತಾರ್ಥ ವನ್ನು ತಡೆದಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.