
ಬೆಳಗಾವಿ : ಬೆಳಗಾವಿಯ ರೋಟರಿ ಕಾರ್ಪೊರೇಷನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಈಜುಗಾರರ ಕ್ಲಬ್ ಬೆಳಗಾವಿ ಹಾಗೂ ಅಕ್ವೇರಿಯಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ವಿಕಲಚೇತನ ಮತ್ತು ದೀನದಲಿತ ಮಕ್ಕಳ 19 ನೇ ಉಚಿತ ಈಜು ತರಬೇತಿ ಶಿಬಿರದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಕ್ವೇರಿಸ್ ಸ್ವಿಮ್ಮ್ ಕ್ಲಬ್ ಅಧ್ಯಕ್ಷರು, ಈಜು ತರಬೇತುದಾರರಾದ ಶ್ರೀ ಉಮೇಶ ಕಲಘಟಗಿ ಮುಂದಾಳತ್ವದಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಶ್ರದ್ಧೆಯಿಂದ ಈಜು ಕಲಿಸಿರುವುದು ಅಭಿನಂದನೀಯ. ಈ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಸಾಧನೆ ನೋಡಿ ಬೆರಗಾಗಿ. ಈ ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನುಪ್ರಕಾಶಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅಂಗವೈಕಲ್ಯ ಹೊಂದಿದ್ದರೂ ಕೂಡ ವಿಶೇಷ ಸಾಧನೆ ಮಾಡಿದ ಈಜುಗಾರರ ಈಜು ಕೌಶಲ್ಯ ಮತ್ತು ಅವರ ಸಾಧನೆಗಳ ನೇರ ಪ್ರದರ್ಶನ ನೋಡಿ, ವೈಕಲ್ಯವೆಂಬುದು ವೈಫಲ್ಯವಲ್ಲ, ಎಲ್ಲ ರೀತಿಯಲ್ಲೂ ಸದೃಢರಾಗಿರುವವರು ನಾಚುವಂತ ಸಾಧನೆ ಮಾಡಿದ ಇವರು ನಮಗೆಲ್ಲ ಪ್ರೆರಣೆಂದರು.

ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ, ಶ್ರೀಮತಿ ಎಮ್. ಎನ್.ಕಪಡಿಯಾ, ಬಿಜೆಪಿ ಮುಖಂಡರಾದ ಎಮ್. ಬಿ.ಜಿರ್ಲಿ, ಹಾಗೂ ಈಜುಪಟುಗಳು, ಪಾಲಕರು ಉಪಸ್ಥಿತರಿದ್ದರು.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು