![](https://kannada.bhavanatv.com/wp-content/uploads/2020/03/WhatsApp-Image-2020-03-01-at-2.14.55-PM-1024x683.jpeg?v=1583075188)
ಬೆಳಗಾವಿ : ಬೆಳಗಾವಿಯ ರೋಟರಿ ಕಾರ್ಪೊರೇಷನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಈಜುಗಾರರ ಕ್ಲಬ್ ಬೆಳಗಾವಿ ಹಾಗೂ ಅಕ್ವೇರಿಯಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ವಿಕಲಚೇತನ ಮತ್ತು ದೀನದಲಿತ ಮಕ್ಕಳ 19 ನೇ ಉಚಿತ ಈಜು ತರಬೇತಿ ಶಿಬಿರದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಕ್ವೇರಿಸ್ ಸ್ವಿಮ್ಮ್ ಕ್ಲಬ್ ಅಧ್ಯಕ್ಷರು, ಈಜು ತರಬೇತುದಾರರಾದ ಶ್ರೀ ಉಮೇಶ ಕಲಘಟಗಿ ಮುಂದಾಳತ್ವದಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಶ್ರದ್ಧೆಯಿಂದ ಈಜು ಕಲಿಸಿರುವುದು ಅಭಿನಂದನೀಯ. ಈ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಸಾಧನೆ ನೋಡಿ ಬೆರಗಾಗಿ. ಈ ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನುಪ್ರಕಾಶಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅಂಗವೈಕಲ್ಯ ಹೊಂದಿದ್ದರೂ ಕೂಡ ವಿಶೇಷ ಸಾಧನೆ ಮಾಡಿದ ಈಜುಗಾರರ ಈಜು ಕೌಶಲ್ಯ ಮತ್ತು ಅವರ ಸಾಧನೆಗಳ ನೇರ ಪ್ರದರ್ಶನ ನೋಡಿ, ವೈಕಲ್ಯವೆಂಬುದು ವೈಫಲ್ಯವಲ್ಲ, ಎಲ್ಲ ರೀತಿಯಲ್ಲೂ ಸದೃಢರಾಗಿರುವವರು ನಾಚುವಂತ ಸಾಧನೆ ಮಾಡಿದ ಇವರು ನಮಗೆಲ್ಲ ಪ್ರೆರಣೆಂದರು.
![](https://kannada.bhavanatv.com/wp-content/uploads/2020/03/WhatsApp-Image-2020-03-01-at-2.14.54-PM-1024x814.jpeg?v=1583075172)
ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ, ಶ್ರೀಮತಿ ಎಮ್. ಎನ್.ಕಪಡಿಯಾ, ಬಿಜೆಪಿ ಮುಖಂಡರಾದ ಎಮ್. ಬಿ.ಜಿರ್ಲಿ, ಹಾಗೂ ಈಜುಪಟುಗಳು, ಪಾಲಕರು ಉಪಸ್ಥಿತರಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.