May 15, 2024

Bhavana Tv

Its Your Channel

ಬಳಗಾನೂರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಟ್ರ‍್ಯಾಕ್ಟರ್ ವಿತರಣೆ

ದಗ ಜಿಲ್ಲೆ; ರಾಜ್ಯ ಲೋಕೋಪಯೋಗಿ ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ.ಪಾಟೀಲರು ಗದಗ ತಾಲೂಕಾ ಬಳಗಾನೂರ ಗ್ರಾಮದ ಶ್ರೀಮತಿ ಯಲ್ಲವ್ವ ಯಲ್ಲಪ್ಪ ಚಲವಾದಿ ಇವರಿಗೆ ಟ್ರ‍್ಯಾಕ್ಟರ್ ನೀಡಿದರು. ನರಗುಂದ ತಾಲೂಕಾ ಹದಲಿ ಗ್ರಾಮದ ದುರಗಪ್ಪ ಚಲವಾದಿ. ಅವರಿಗೆ ಸನ್ ೨೦೨೧-೨೨ ಸಾಲಿನ ಕ್ರಷಿ ಇಲಾಖೆಯ ಎಸ್‌ಇಎಸ್‌ಪಿ/ಟಿಎಸ್‌ಪಿ ವಿಶೇಷ ಘಟಕ ಯೋಜನೆಯಡಿಯ ಸಹಾಯ ಧನದಲ್ಲಿ ಟ್ರ‍್ಯಾಕ್ಟರ್ ವಿತರಿಸಿದರು.

ಸರ್ಕಾರದ ಯೋಜನೆಗಳು ಬಡವರಿಗೆ ದೊರಕಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಸಿ ಸಿ.ಪಾಟೀಲ ಸಾಹೇಬರು ಮಾಡಿದ್ದಾರೆ. ಕ್ಷೇತ್ರಗಳಿಗ ಅಭಿವ್ರದ್ದಿಗೆ ಸಾಕಷ್ಟು ಶ್ರಮಿಸುವದರ ಜೊತೆಗೆ ಕ್ಷೇತ್ರದಲ್ಲಿ ಬಡಜನರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸುತ್ತಾ ಜನರ ಮನಸ್ಸಿನಲ್ಲಿ ಅಚ್ಚಳಿಯದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಸರಕಾರದ ಯೋಜನೆ ಕಾರ್ಯಕರ್ತರಿಗೆ ಸಿಗದೇ ಹೋದ ಸಂದರ್ಭದಲ್ಲಿ ಅಥವಾ ಅನುದಾನದ ಕೊರತೆಯಿಂದಾಗಿ ಸೌಲಭ್ಯ ಕಾರ್ಯಕರ್ತರಿಗೆ ಮುಟ್ಟುವದಿಲ್ಲವೆಂದು ಸಾಹೇಬರ ಗಮನಕ್ಕೆ ಬಂದರೆ ಅದನ್ನು ಸವಾಲಾಗಿ ಸ್ವೀಕರಿಸಿ ಸಂಬAಧ ಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅನುದಾನವನ್ನು ಒದಗಿಸಿ ಸೌಲಭ್ಯ ಅರ್ಹ ಪಲಾನುಭವಿಗೆ ತಲುಪಿಸಿ ಕೊಡುವ ಸಮರ್ಥ ನಾಯಕರನ್ನು ಪಡೆದ ನಮ್ಮ ನರಗುಂದ ಮತಕ್ಷೇತ್ರದ ಜನತೆ ಭಾಗ್ಯಶಾಲಿಗಳು. ಸರ್ಕಾರದ ಯೋಜನೆಯ ಪ್ರಕಾರ ನನಗೆ ಟ್ರ‍್ಯಾಕ್ಟರ್ ಪಡೆದುಕೊಳ್ಳುವದು ಕಷ್ಟಸಾಧ್ಯವಾಗಿತ್ತು.ಅದನ್ನು ಸಾಹೇಬರ ಗಮನಕ್ಕೆ ತಂದ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ನನಗೆ ಯೋಜನೆಯ ಪಲಾನುಭವಿಯಾಗಿ ಮಾಡಿದರು ಎಂದು ಪಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.

ವರದಿ ವೀರಣ್ಣ ಸಂಗಳದ ರೋಣ

error: