May 16, 2024

Bhavana Tv

Its Your Channel

ರಸ್ತೆ ಅಭಿವೃದ್ದಿಗೆ ಮೊದಲ ಆದ್ಯತೆ- ಶಾಸಕ ಕೆ.ಜಿ.ಬಂಡಿ

ರೋಣ ಮತಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ಜಿ.ಬಂಡಿ ಹೇಳಿದರು ಅವರು ಸೋಮವಾರ ತಾಲೂಕಿನ ಇಟಗಿ ಗ್ರಾಮದಲ್ಲಿ ಇಟ್ಟಿಗಿಯಿಂದ ಸೂಡಿಯ ವರೆಗೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು, ರಸ್ತೆಗಳ ಸುಧಾರಣೆಯಿಂದ ಮಾತ್ರ ಗ್ರಾಮಗಳು ಅಭಿವೃದ್ದಿ ಹೊಂದುತ್ತವೆ. ಕ್ಷೇತ್ರದ ಪ್ರತಿ ಹಳ್ಳಿಗಳ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಒಟ್ಟು 4.50.ಕೋಟಿ ಲಕ್ಷ ರೂ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು

ಪ್ರಧಾನ ಮಂತ್ರಿ ಅವರು ಪ್ರತಿ ಹಳ್ಳಿಗಳ ರಸ್ತೆ ಸುಧಾರಣೆಯಾಗಬೇಕೆಂದು ಈ ಯೋಜನೆಯನ್ನು ತಂದಿದ್ದಾರೆ ಇದರಿಂದ ಅನೇಕ ಹಳ್ಳಿಗಳ ರಸ್ತೆಗಳು ಸುಧಾರಣೆಗೊಂಡು ಜನರಿಗೆ ಅನುಕೂಲಕರವಾಗಿವೆ, ಆದರಿಂದ ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಗ್ರಾಮದ ಜನರು ಗುತ್ತಿಗೆದಾರರೊಂದಿಗೆ ಸಹಕರಿಸಿ ಒಳ್ಳೆಯ ರಸ್ತೆಯನ್ನು ನಿರ್ಮಾಣಕ್ಕೆ ಕೈಜೋಡಿಸಬೇಕು, ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿಗೆ ಒತ್ತು ನೀಡಿ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ನಾಗರಾಜ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಕಂಬಳಿ. ಬಿಜೆಪಿ ಮುಖಂಡರಾದ ಸಂಗನಗೌಡ ಮಾಲಿ ಪಾಟೀಲ, ರೋಣ ಮಂಡಲದ ಅಧ್ಯಕ್ಷರಾದ ಮುತ್ತಣ್ಣ ಕಡಗದ, ಇಟಗಿ ಗ್ರಾಮ ಪಂಚಾಯತಿಯ ಸದಸ್ಯರಾದ ರೇಣುಕಾ ಅವಾರಿ, ದ್ರಾಕ್ಷಾಯಿಣಿ ಗೋದಿಗನೂರು ಲಂಕೇಶ, ಓಲೆಕಾರ ಬಸಯ್ಯ ಹಿರೇಮಠ, ಎಂಎಸ್ ದೇಸಾಯಿ,
ನಾಗೇಶ್ ಲಕ್ಕಲಕಟ್ಟಿ ರಾಮಣ್ಣ, ಗ್ರಾಮ ಪಂಚಾಯತಿ ಸದಸ್ಯರು
ಹಾಗೂ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಬಿಜೆಪಿ ಯುವಕರು ಹಾಗೂ ಇಟಗಿ ಗ್ರಾಮದ ಗುರುಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: