ರೋಣ :ಜೂನ್ 13ರಂದು ನಡೆಯಲಿರುವ ಕರ್ನಾಟಕ ವಿಧಾನಪರಿಷತ್ ಚುನಾವಣೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ರೋಣ ತಾಲೂಕ ವಿಧಾನಸಭಾ ಕ್ಷೇತ್ರದಲ್ಲಿ ಅಂದಪ್ಪ ಸಂಕನೂರು ಮತಯಾಚನೆ ಮಾಡಿದರು.
ಕೆ ವಿ ಶಾಂತಗಿರಿಮಠ ಅಬ್ಬಿಗೇರಿ ನರೇಗಲ ಜಕ್ಕಲಿ ಸೇರಿದಂತೆ ಅನೇಕ ಸಂಸ್ಥೆಗಳಿಗೆ ತೆರಳುವ ಮೂಲಕ ಹೊರಟ್ಟಿ ಪರ ಬಿರುಸಿನ ಪ್ರಚಾರ ಮತಯಾಚನೆ ಮಾಡಿದರು
ಅಂದಪ್ಪ ಸಂಕನೂರ ಮಾತನಾಡಿ 1980ರಿಂದ ಸತತವಾಗಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಪಡೆದು ಅವರು ಏಳು ಬಾರಿ ಅಜೇಯರಾಗಿರುವುದು ಶಿಕ್ಷಕರ ಪರವಾಗಿ ಮಾಡಿದ ತ್ಯಾಗದ ಫಲವಾಗಿದೆ. ಈ ಬಾರಿಯೂ ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಬಸವರಾಜ ಹೊರಟ್ಟಿ ಅವರಿಗೆ ನೀಡಬೇಕು ಎಂದರು.
ಬಳಿಕ ಮಾಜಿ ಗದಗ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು ಎಸ್ ಎಂ ಕೊಟಗಿ ಮಾತನಾಡಿ ಈಗಾಗಲೇ ಬಸವರಾಜ ಹೊರಟ್ಟಿ ಅವರು 7 ಬಾರಿ ಆಯ್ಕೆಯಾಗಿದ್ದಾರೆ ಎಂಟನೇ ಬಾರಿಗೆ ತಮ್ಮ ಮತದಿಂದ ಆಯ್ಕೆ ಮಾಡಿ ಹೊಸ ಇತಿಹಾಸ ನಿರ್ಮಿಸಿ ಗಿನ್ನಿಸ್ ದಾಖಲೆಯ ಸಾಧನೆಗೆ ಕಾರಣರಾಗಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಅಂದಪ್ಪ ಸಂಕನೂರ, ಬಿಜೆಪಿ ಯುವ ಮುಖಂಡರು ಗಜೇಂದ್ರಗಡ,
ಶಿಕ್ಷಕರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷರು ಎಸ್ ಎಂ ಕೋಟಗಿ ಗಣೇಶ, ಗೂಗಲೋತ್ತರ ಶಿವು ಕೋಸಗಿ, ಶಿವಾನಂದ ಕುರಿ ಕೃಷ್ಣ ಸಿಂಗಿ,್ರ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ