April 29, 2024

Bhavana Tv

Its Your Channel

ಭಾರಿ ಮಳೆಗೆ ಮನೆ ಕಳೆದುಕೊಂಡ ರೈತ ಕುಟುಂಬದ ನೆರವಿಗೆ ನಿಂತ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಸ್ ಸಂತೋಷ್.

ಕಿಕ್ಕೇರಿ:ಗುರುವಾರ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಕಡು ಬಡವ ರೈತ ಕುಟುಂಬದ ನೆರೆವಿಗೆ ನಿಂತ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಸ್ ಸಂತೋಷ್.

ಕೃಷ್ಣರಾಜಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಧುಗೊನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಗ್ರಾಮದ ಕಡು ಬಡವ ರೈತ ಮಂಜೇಗೌಡ ಎಂಬ ಬಡ ಕುಟುಂಬ ರೈತ ಕುಟುಂಬ ವಾಸಿಸುತ್ತಿದ್ದ ಮನೆ ಸಂಪೂರ್ಣ ನೆಲಸಮಗೊಂಡಿದೆ

ವಿಷಯ ತಿಳಿದ ಜೆ.ಡಿ.ಎಸ್ ಪಕ್ಷದ ಯುವ ನಾಯಕರಾದ ಬಸ್ ಸಂತೋಷ್ ಸ್ಥಳಕ್ಕೆ ಬಂದು ರೈತ ಕುಟುಂಬಕ್ಕೆ ಧೈರ್ಯ ತುಂಬಿದರು ಸ್ಥಳಿಯ ಗ್ರಾಮ ಪಂಚಾಯತಿಯಿAದ ಆಶ್ರಯ ಮನೆ ಯೋಜನೆಯಡಿ ಅಧಿಕಾರಿಗಳೊಂದಿಗೆ ಮಾತನಾಡಿ ಮನೆ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ ರೈತ ಕುಟುಂಬದಕ್ಕೆ ಕೈಲಾದ ವೈಯಕ್ತಿಕ ಅರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ..

error: