ಕಿಕ್ಕೇರಿ:- ಒಂದೇ ಗ್ರಾಮದದಲ್ಲಿ ಒಂದೇ ದಿನ ಮೂರು ದೇವಾಲಯಗಳು ಲೋಕಾರ್ಪಣೆಗೆ ಸಜ್ಜು ಸಕಾಲಕ್ಕೆ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನ್ ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ ಮನವಿ
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಗೊಡೆಹೊಸಹಳ್ಳಿ ಗ್ರಾಮದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯ ದೇವಾಲಯ, ಶ್ರೀಮಾರಮ್ಮ ದೇವಾಲಯ, ಶ್ರೀ ಚನ್ನಕೇಶವ ದೇವಾಲಯವು ಭಾನುವಾರ ಮತ್ತು ಸೋಮವಾರ ರಂದು ವಿವಿಧ ಹೋಮ, ಕಳಸ ಪ್ರತಿಷ್ಟಾಪನೆ, ದೇವರ ವಿಗ್ರಹ ಪ್ರತಿಷ್ಠಾಪನೆ, ಅನ್ನ ಸಂತರ್ಪಣೆ, ನಾಟಕ ಸೇರಿದಂತೆ ಹಲವು ಕಾರ್ಯಕ್ರಮ ನೆಡೆಯಲಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಸಚಿವರಾದ ಕೆ ಸಿ ನಾರಾಯಣಗೌಡ, ಶಾಸಕರಾದ ಬಾಲಕೃಷ್ಣ, ಪ್ರೀತಮ್ ಗೌಡ, ಸೂರಜ್ ರೇವಣ್ಣ, ಹಲವು ಗಣ್ಯರು ಭಾಗವಹಿಸಲಿದ್ದಾರೆ ಸಕಾಲಕ್ಕೆ ಎಲ್ಲಾ ಭಕ್ತಾದಿಗಳು ಬಂದು ಕಾರ್ಯಕ್ರಮ ಯಶಸ್ಸಿ ಮಾಡಿಕೊಡಬೇಕೆಂದು ಮನ್ ಮುಲ್ ನಾ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ್ರು ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರು ಮಂಜೇಗೌಡ, ನಾಗೇಶ್, ಚನ್ನಕೇಶವ, ಶಿವಣ್ಣ, ಲವೇಶ್, ಅರ್ಚಕರು, ಲೋಕೇಶ್ ಅರ್ಚಕರು, ನಂದಕುಮಾರ್, ಶಿವರಾಮೇಗೌಡ್ರು ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ