May 15, 2024

Bhavana Tv

Its Your Channel

ಹಾಸನಾಂಭ ಐಯ್ಯಂಗಾರ್ ಕೇಕ್ ಪ್ಯಾಲೇಸ್ ಬೇಕರಿಯ ಬೀಗ ಒಡೆದು ಕಳ್ಳತನ

ಕೃಷ್ಣರಾಜಪೇಟೆ ; ಪಟ್ಟಣದ ಜಯನಗರ ಬಡಾವಣೆಯ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಹಾಸನಾಂಭ ಐಯ್ಯಂಗಾರ್ ಕೇಕ್ ಪ್ಯಾಲೇಸ್ ಬೇಕರಿಯ ಬೀಗ ಒಡೆದು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಹಾಸನಾಂಭ ಕೇಕ್ ಪ್ಯಾಲೇಸ್ ಬೇಕರಿಯ ಬೀಗ ಒಡೆದು ನಿನ್ನೆ ತಡರಾತ್ರಿ ಕಳ್ಳತನ ಮಾಡಿರುವ ದುಷ್ಕರ್ಮಿಗಳು ಬೇಕರಿಯ ಗಲ್ಲದಲ್ಲಿಟ್ಟಿದ್ದ ನಗದು ಹಣ ೧೫ಸಾವಿರ ರೂಪಾಯಿ, ಬೆಲೆಬಾಳುವ ಬಿಸ್ಕೆಟ್, ಚಾಕಲೇಟ್ ಹಾಗೂ ವೇಪರ್ಸ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇಂದು ಬೆಳಿಗ್ಗೆ ಬೇಕರಿಯ ಬಾಗಿಲು ತೆಗೆಯಲು ಬೇಕರಿಯ ಮಾಲೀಕರಾದ ಪ್ರಜ್ವಲ್ ಬಂದಾಗ ಬಾಗಿಲಿನ ಬೀಗ ಒಡೆದಿರುವುದು, ಬೇಕರಿಯ ರೋಲಿಂಗ್ ಶೆಟರ್ ಎತ್ತಿರುವುದು ಕಂಡು ಅನುಮಾನಗೊಂಡು ಒಳಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ತಿಳಿದುಬಂತು.

ಬೇಕರಿಯ ಮಾಲೀಕರಾದ ಪ್ರಜ್ವಲ್ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಟಿವಿಯ ಫೂಟೇಜ್ ಗಳನ್ನು ಸಂಗ್ರಹಿಸಿಕೊAಡಿದ್ದು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ ಜಿಲ್ಲೆ.

error: