ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದಾಸಗೊಳಪುರ ಗ್ರಾಮಸ್ಥರು ಇಂದು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯ ರಾಜಾಹುಲಿ ದಿನೇಶ್ ಮತ್ತು ಆತನ ಸಹೋದರರ ವಿರುದ್ಧ ರಕ್ಷಣೆ ನೀಡಬೇಕು. ನಾವು ಬೇಸಾಯ ಮಾಡುತ್ತಿರುವ ಗ್ರಾಮಕ್ಕೆ ಸೇರಿರುವ ೯ ಎಕರೆ ೨೨ ಗುಂಟೆ ಜಮೀನನ್ನು ಗ್ರಾಮಸ್ಥರಿಗೆ ದರಖಾಸ್ತು ಮೂಲಕ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿ ದಿನೇಶ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಮನವಿ ಮಾಡಿದರು …
ದಾಸಗೊಳಪುರ ಗ್ರಾಮದ ಸರ್ವೇ ನಂಬರ್ ೧೭ಕ್ಕೆ ಸೇರಿರುವ ೫ಎಕರೆ ೨೨ ಗುಂಟೆ ಜಮೀನನ್ನು ಗ್ರಾಮದ ೧೦ ಕುಟುಂಬಗಳು ಕಳೆದ ೩೦ ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ಜಮೀನಿನಲ್ಲಿ ನೆಟ್ಟಿ ಬೆಳೆಸಿದ್ದ ತೆಂಗಿನ ಗಿಡಗಳು ಹಾಗೂ ಇತರೆ ಬೆಳೆಗಳನ್ನು ಜೆಸಿಬಿ ಯಂತ್ರ ಬಳಸಿ ನಾಶಪಡಿಸಿರುವ ರಾಜಾಹುಲಿ ದಿನೇಶ್ ಗ್ರಾಮಕ್ಕೆ ಚನ್ನರಾಯಪಟ್ಟಣ ಸೇರಿದಂತೆ ಹೊರಗಿನಿಂದ ರೌಡಿಗಳನ್ನು ಕರೆ ತಂದು ಕೊಲೆ ಬೆದರಿಕೆ ಹಾಕಿಸಿ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು. ನಮ್ಮ ಜೀವನಕ್ಕೆ ಆಧಾರವಾಗಿರುವ ಗ್ರಾಮದ ಜಮೀನನ್ನು ನಮಗೆ ಕೊಡಿಸಿಕೊಡಬೇಕು. ಗ್ರಾಮಕ್ಕೆ ಪುಡಿರೌಡಿಗಳು ಹಾಗೂ ಗೂಂಡಾಗಳೊAದಿಗೆ ಆಗಮಿಸಿ ದೌರ್ಜನ್ಯ ನಡೆಸುತ್ತಿರುವ ರಾಜಾಹುಲಿ ದಿನೇಶ್ ಹಾಗೂ ಆತನ ಸಹೋದರರಿಂದ ನಮಗೆ ರಕ್ಷಣೆ ನೀಡಬೇಕು. ಗ್ರಾಮದಲ್ಲಿ ಗಲಾಟೆ ಗದ್ದಲ ನಡೆಸಿ ಅಶಾಂತಿಗೆ ಕಾರಣವಾಗಿರುವ ರಾಜಾಹುಲಿ ದಿನೇಶ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು…
ಪ್ರತಿಭಟನೆಯಲ್ಲಿ ದಾಸಗೊಳಪುರ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರಾದ ದೇವೇಗೌಡ, ರೇಣುಕಾ, ಕರೀಗೌಡ, ದಿಲೀಪ್, ಸೌಮ್ಯ, ಸಾವಿತ್ರಮ್ಮ, ರಾಜೇಗೌಡ, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು…
ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ