ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಪುರಸಭೆ ಕಾರ್ಯಾಕಯದಲ್ಲಿ ನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ ೩೩೩ನೇ ಜಯಂತ್ಯೋತ್ಸವದ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಭಕ್ತಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾಭಿಷೇಕ ಮಾಡಿ ಭಕ್ತಿನಮನ ಸಲ್ಲಿಸಿದರು …
ತಮ್ಮ ಕೀರ್ತನೆಗಳು ಹಾಗೂ ಸಾಮಾಜಿಕ ಸಂದೇಶಗಳ ಮೂಲಕ ಜಾತಿಪದ್ದತಿ, ಸಾಮಾಜಿಕ ಅಸಮಾನತೆಯ ನಿರ್ಮೂಲನೆ ಮಾಡಿ ಸಮಾನತೆಯಿಂದ ಕೂಡಿರುವ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಹೋರಾಟ ನಡೆಸಿ ಅಪಾರವಾದ ಕೊಡುಗೆಯನ್ನು ನೀಡಿರುವ ಶ್ರೇಷ್ಠ ಸಂತರಾದ ಭಕ್ತ ಕನಕದಾಸರ ಜೀವನದ ಆದರ್ಶಗಳನ್ನು ಯುವಜನರು ಪಾಲಿಸಬೇಕು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ಮನವಿ ಮಾಡಿದರು…
ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು ಕಾರ್ಯಕ್ರಮದಲ್ಲಿ ಮಾತನಾಡಿ ನಿಜವಾದ ಭಕ್ತಿಯ ಮೂಲಕ ಭಗವಂತನ ಸಾಕ್ಷಾತ್ಕಾರ ಹೊಂದಬಹುದು ಎಂದು ಸಾಧಿಸಿ ತೋರಿಸಿ ಭಗವಂತ ಶ್ರೀಕೃಷ್ಣ ಪರಮಾತ್ಮನ ದರ್ಶನ ಪಡೆದ ದಾಸಶ್ರೇಷ್ಠರಾದ ಭಕ್ತಕನಕದಾಸರ ಗುಣಗಾನ ಮಾಡಿದರು.
ಪುರಸಭೆಯ ಸದಸ್ಯರಾದ ಕೆ.ಬಿ.ಮಹೇಶ್, ಹೆಚ್.ಡಿ.ಅಶೋಕ್, ಹೆಚ್.ಎನ್.ಪ್ರವೀಣ್, ಗಿರೀಶ್, ಹೆಚ್.ಆರ್.ಲೋಕೇಶ್, ಶೋಭಾದಿನೇಶ್, ಶುಭಾಗಿರೀಶ್, ಪದ್ಮರಾಜು, ಇಂದ್ರಾಣಿ ವಿಶ್ವನಾಥ, ಖಮ್ಮರ್ ಬೇಗಂ ಸಲ್ಲೂ, ನರಸಿಂಹನಾಯಕ, ಪರಿಸರ ಎಂಜಿನಿಯರ್ ರುದ್ರೇಗೌಡ, ಆರೋಗ್ಯ ಪರಿವೀಕ್ಷಕ ಅಶೋಕ್, ಮಂಜುಳಾ, ಮಂಟೇಮAಜು, ನರಸಿಂಹಶೆಟ್ಟಿ, ಕೆ.ಎನ್.ಶಾರದಾ, ಚಿಕ್ಕಶಾರದಾ, ರತ್ನ, ಬಬಿತಾ ಸೇರಿದಂತೆ ಕಛೇರಿಯ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ