May 15, 2024

Bhavana Tv

Its Your Channel

ಕೆಂಪೇಗೌಡರ ೫೧೨ನೇ ಜಯಂತಿ ಮಹೋತ್ಸವ

ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತದ ವತಿಯಿಂದ ಧರ್ಮಪ್ರಭು, ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ ೫೧೨ನೇ ಜಯಂತಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು …

ದೂರದರ್ಶಿತ್ವದ ಆಡಳಿತದ ಕನಸುಹೊಂದಿದ್ದ ದಕ್ಷ ಆಡಳಿತಗಾರ, ಸಾವಿರಾರು ಕೆರೆಗಳ ನಿರ್ಮಾತೃವಾದ ನಾಡಪ್ರಭು ಕೆಂಪೇಗೌಡರ ಆಡಳಿತವು ನಾಡಿನ ಎಲ್ಲಾ ದೊರೆಗಳಿಗಿಂತಲೂ ವಿಭಿನ್ನವಾಗಿದೆ. ಪ್ರಜಾರಕ್ಷಕರಾಗಿ ಜನಪರವಾದ ಆಡಳಿತ ನೀಡಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಗುಣಗಾನ ಮಾಡಿದರು..


ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಕರವೇ ಅಧ್ಯಕ್ಷ ಹೊನ್ನೇನಹಳ್ಳಿವೇಣು, ಪಧವೀದರ ಘಟಕದ ಜಿಲ್ಲಾ ಉಪಾಧ್ಯಕ್ಷ ಚೇತನಕುಮಾರ್, ತಾಲ್ಲೂಕು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಬಿಜೆಪಿ ಮುಖಂಡ ಭರತ್ ಕುಮಾರ್, ತಾಲ್ಲೂಕು ಕಛೇರಿಯ ಪ್ರಥಮದರ್ಜೆ ಸಹಾಯಕ ಹಿರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ , ಮಂಡ್ಯ

error: