May 15, 2024

Bhavana Tv

Its Your Channel

ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಹಾಗೂ ಹುತಾತ್ಮರಾದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಹಾಗೂ ಹುತಾತ್ಮರಾದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು .

ತಮ್ಮ ಜೀವದ ಹಂಗನ್ನು ತೊರೆದು ಅಗ್ನಿವಿಪತ್ತು ಸೇರಿದಂತೆ ಹಲವಾರು ಪ್ರಾಕೃತಿಕ ಸಂಕಷ್ಟಗಳಲ್ಲಿ ಪ್ರಾಮಾಣಿಕತೆಯ ಸೇವೆಸಲ್ಲಿಸಿ ಅಮೂಲ್ಯವಾದ ಪ್ರಾಣ ಸೇರಿದಂತೆ ಆಸ್ತಿಪಾಸ್ತಿಗಳನ್ನು ಸಂರಕ್ಷಣೆ ಮಾಡುವ ಅಗ್ನಿಶಾಮಕ ಇಲಾಖೆಯ ಕಾರ್ಯದಕ್ಷತೆಯು ಎಲ್ಲಾ ಇಲಾಖೆಗಳಿಗೂ ಮಾದರಿಯಾಗಿದೆ ಎಂದು ತಿಳಿಸಿದ ಬಸ್ ಡಿಪೋ ವ್ಯವಸ್ಥಾಪಕ ವಿಪಿನ್ ಕೃಷ್ಣ ಸೇವೆ ಮತ್ತು ಕರ್ತವ್ಯದಕ್ಷತೆಗೆ ಮತ್ತೊಂದು ಹೆಸರೇ ಅಗ್ನಿಶಾಮಕ ತುರ್ತು ಸೇವೆಯಾಗಿದೆ ಎಂದು ಶ್ಲಾಘಿಸಿದರು..

ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಧಿಕಾರಿಯಾದ ಕ್ಯಾಪ್ಟನ್ ಎಂ.ಸಿ.ಗೋಪಿನಾಥ್ ಮತ್ತು ವಸುಮತಿ ಗೋಪಿನಾಥ್ ಅವರನ್ನು ಇಲಾಖೆಯ ವತಿಯಿಂದ ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶಿವಣ್ಣ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂಧಿಗಳು ಸನ್ಮಾನಿಸಿ ಗೌರವಿಸಿದರು.

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಕೆ.ಆರ್.ಪೇಟೆ ಬಸ್ ಡಿಪೋ ಉಗ್ರಾಣಾಧಿಕಾರಿ ಮುತ್ತೇಶ್, ಪತ್ರಕರ್ತರಾದ ಸೈಯ್ಯದ್ ಖಲೀಲ್, ಹರಿಚರಣತಿಲಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಭಾರತ ರತ್ನ, ವಿಶ್ವಜ್ಞಾನಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಿಬ್ಬಂಧಿಗಳಾದ ಮೋಹನಕುಮಾರ್, ಶಿವಮೂರ್ತಿ, ಮೋಹನ್, ಚಂದನ್, ಪ್ರಸನ್ನ, ಪ್ರಮೋದ್ ಮತ್ತು ಗೃಹರಕ್ಷಕ ದಳದ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: