April 29, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭೆ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ

ಕೆ.ಆರ್.ಪೇಟೆ ಪುರಸಭೆ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರಧ್ಧಾಭಕ್ತಿಯಿಂದ ಆಚರಿಸಲಾಯಿತು ..

ಪುರಸಭೆ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್, ಹಿರಿಯ ಸದಸ್ಯರಾದ ಪ್ರೇಮಕುಮಾರ್, ಬಸ್ ಸಂತೋಷ್, ಹೆಚ್.ಆರ್.ಲೋಕೇಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ವಿಶೇಷ ಪೂಜೆಸಲ್ಲಿಸಿ ಸಂವಿಧಾನ ಶಿಲ್ಪಿಯ ಜೀವನದ ಸಾಧನೆಗಳು ಹಾಗೂ ಕೊಡುಗೆಯನ್ನು ಕುರಿತು ಮಾತನಾಡಿದರು..

ಮಹಿಳಾ ಸಬಲೀಕರಣ ಹಾಗೂ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಭಾರತ ದೇಶದ ಸಮಗ್ರವಾದ ಜನರ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ರಚಿಸಿ ವಿಶ್ವಕ್ಕೆ ಮಾದರಿಯಾಗಿರುವ ವಿಶ್ವರತ್ನ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಎಲ್ಲರೂ ಒಂದಾಗಿ ದುಡಿಯಬೇಕು ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿ ಮನವಿ ಮಾಡಿದರು…

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಶಾಮಿಯಾನತಿಮ್ಮೇಗೌಡ, ಗಿರೀಶ್, ಬಸ್ ಸಂತೋಷ್ ಕುಮಾರ್, ಅಶೋಕ್, ಸೌಭಾಗ್ಯ, ಕಲ್ಪನಾ, ಡಾ.ಕೆ.ಎಸ್.ರಾಜೇಶ್, ತಿಬೆಟ್ ಮಹೇಶ್, ತೇಜಸ್ವಿನಿ, ಹನುಮಂತರಾಜ್, ಸಹಾಯಕ ಎಂಜಿನಿಯರ್ ಮಧುಸೂದನ್, ಪರಿಸರ ಎಂಜಿನಿಯರ್ ಅರ್ಚನಾ, ಕಂದಾಯಾಧಿಕಾರಿ ರವಿಕುಮಾರ್, ರಾಜೇಶ್, ಪುಟ್ಟ, ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: