April 29, 2024

Bhavana Tv

Its Your Channel

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು..

ಕೆ.ಆರ್.ಪೇಟೆ :- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿದ್ದಾನೆ ಕೃಷ್ಣರಾಜಪೇಟೆ ತಾಲ್ಲೂಕಿನ ಸಾಕ್ಷೀಬೀಡು ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ನಡೆದ ದುರ್ಘಟನೆ.. ದುಃಖದಲ್ಲಿ ಮುಳುಗಿರುವ ಗ್ರಾಮಸ್ಥರು …

ತುಂಡಾಗಿ ಕತ್ತರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತರಾಗಿರುವ ಘಟನೆಯು ಕೆ.ಆರ್.ಪೇಟೆ ತಾಲ್ಲೂಕಿನ ಸಾಕ್ಷೀಬೀಡು ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ…

ಸಾಕ್ಷೀಬೀಡು ಗ್ರಾಮದ ಪ್ರಗತಿಪರ ರೈತರಾದ ನಾಗಣ್ಣ ಅವರ ಪುತ್ರ ಯುವ ಮುಂದಾಳು ಮಹದೇವ (೨೩) ವಿದ್ಯುತ್ ಪ್ರವಹಿಸಿ ಮೃತನಾದ ದುರ್ದೈವಿಯಾಗಿದ್ದಾನೆ.ಘಟನೆಯ ಬಗ್ಗೆ ಮೃತ ಮಹದೇವ ಅವರ ತಂದೆ ನಾಗಣ್ಣ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ..

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಶೇಖರಮೂರ್ತಿ, ಕಾರ್ಯಪಾಲಕ ಎಂಜಿನಿಯರ್ ಪ್ರತಿಭಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು..

ಪ್ರಗತಿಪರ ಕೃಷಿಕರಾದ ನಾಗಣ್ಣ ಅವರ ಏಕೈಕ ಪುತ್ರನಾದ ಮಹದೇವ ವಿದ್ಯುತ್ ಪ್ರವಹಿಸಿ ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಸಾಕ್ಷೀಬೀಡು ಗ್ರಾಮದಲ್ಲಿ ದುಃಖದ ಛಾಯೆಯು ಮಡುಗಟ್ಟಿದೆ..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: