May 2, 2024

Bhavana Tv

Its Your Channel

ಶ್ರೀ ದೊಡ್ಡಕೇರಮ್ಮನವರ ನೂತನ 50 ಲಕ್ಷ ರೂ ವೆಚ್ಚದ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ಪಟ್ಟಣದ ನಗರದೇವತೆ ಶ್ರೀ ದೊಡ್ಡಕೇರಮ್ಮನವರ ನೂತನ ೫೦ ಲಕ್ಷರೂ ವೆಚ್ಚದ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಡಾ.ನಾರಾಯಣಗೌಡ. ದೊಡ್ಡಕೇರಮ್ಮನವರ ನೂತನ ದೇವಾಲಯದ ಪುನರ್ ನಿರ್ಮಾಣಕ್ಕೆ ಸಾಥ್ ನೀಡಿದ ಕೆ.ಆರ್.ಪೇಟೆ ಗ್ರಾಮಸ್ಥರು.ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಹಾಗೂ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಅವರ ನೇತೃತ್ವದಲ್ಲಿ ನಡೆದ ಭೂಮಿಪೂಜಾ ಕಾರ್ಯಕ್ರಮ ನಡೆಯಿತು.ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ನೀತಿಸಂಹಿತೆಯು ಜಾರಿಯಾದ ಕಾರಣ ಸರಳವಾಗಿ ನಡೆದ ಭೂಮಿಪೂಜೆ.

ಕೆ.ಆರ್.ಪೇಟೆ ಪಟ್ಟಣದ ಐತಿಹಾಸಿಕ ದೇವಿರಮ್ಮಣ್ಣಿ ಕೆರೆಯಿಂದ ಕಳಸಗಳ ಮೂಲಕ ಪವಿತ್ರ ಗಂಗಾಜಲವನ್ನು ತಂದು ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ಮುತ್ತೈದೆಯರು..

ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಾ.ನಾರಾಯಣಗೌಡ ಮಾತನಾಡಿ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಅಲ್ಲದೇ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಗ್ರಾಮದೇವತೆಯ ದೇವಾಲಯವು ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಹಳೆಯ ದೇವಾಲಯವನ್ನು ಕೆಡವಿಹಾಕಿ ಹೊಸದಾಗಿ ೫೦ ಲಕ್ಷರೂ ವೆಚ್ಚದಲ್ಲಿ ನೂತನ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ ಸಚಿವ ಡಾ.ನಾರಾಯಣಗೌಡ ದೊಡ್ಡಕೇರಮ್ಮನವರ ರಥವೂ ಕೂಡ ಗಿಡ್ಡದಾಗಿದ್ದು ಶಿಥಿಲವಾಗಿರುವ ರಥವನ್ನು ಬೃಹದಾರವಾಗಿ ನಿರ್ಮಿಸುತ್ತಿರುವ ಕಾರ್ಯವೂ ಚಾಲನೆಯಲ್ಲಿದ್ದು ಆದಷ್ಟು ಶೀಘ್ರವಾಗಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು..

ನಾಸಿಕ್ ಡೋಲುಬಾರಿಸಿ ಸಂಭ್ರಮಿಸಿದ ಸಚಿವ ನಾರಾಯಣಗೌಡ ಹಾಗೂ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ..

ಕೆ.ಆರ್.ಪೇಟೆ ಗ್ರಾಮದೇವತೆ ಶ್ರೀ ದೊಡ್ಡಕೇರಮ್ಮನವರ ದೇವಾಲಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಡಾ.ನಾರಾಯಣಗೌಡ ಹಾಗೂ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ನಾಸಿಕ್ ಡೋಲು ಭಾರಿಸಿ ಯುವಜನರೊಂದಿಗೆ ಸಂಭ್ರಮಿಸಿದರಲ್ಲದೇ ಭೂಮಿಪೂಜಾ ಕಾರ್ಯಕ್ಕೆ ವಿಶೇಷ ಕಳೆಯನ್ನು ತಂದುಕೊಟ್ಟರು..

ದೊಡ್ಡಕೇರಮ್ಮನವರ ದೇವಾಲಯದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ದೇವಾಲಯ ನಿರ್ಮಾಣ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಚಂದ್ರಶೇಖರ್, ಹೆಗಡಿ ಕೆ.ಎನ್.ಕೃಷ್ಣ, ಪುರಸಭೆ ಸದಸ್ಯರಾದ ಕೆ.ಸಿ.ಮಂಜುನಾಥ್, ಕೆ.ಎಸ್.ಪ್ರಮೋದ್, ಕೆ.ಎಸ್.ಸಂತೋಷ್, ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಕೆ.ಆರ್.ನೀಲಕಂಠ, ಸುಗುಣಾರಮೇಶ್, ಪುರಸಭೆ ಮಾಜಿಅಧ್ಯಕ್ಷ ಕೆ.ಸಿ.ವಾಸು, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ, ಹಣ್ಣಿನ ಅಂಗಡಿ ರಾಮಣ್ಣ, ಕಡ್ಲೆಕಾಯಿ ಕೃಷ್ಣ, ಸಚಿವರ ಆಪ್ತಸಹಾಯಕರಾದ ದಯಾನಂದ, ಪ್ರದೀಪ್ ಕುಮಾರ್, ಸ್ನೇಹಿತ ರಮೇಶ್, ಹಂಸರಮೇಶ್, ಮೋದೂರು ಮಂಜುನಾಥ್, ಬಿಗ್ ಬಾಸ್ ಮೋಹನ್, ಚಂದ್ರಕಲಾ ರಮೇಶ್, ಉಪನ್ಯಾಸಕ ಕುಮಾರ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: