April 29, 2024

Bhavana Tv

Its Your Channel

ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆ ಸಿಬ್ಬಂದಿಗಳ ದಾಳಿ, ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟಗಾರರಿಗೆ ದಂಡ ವಿಧಿಸಿ ಎಚ್ಚರಿಸಿದ ಮುಖ್ಯಾಧಿಕಾರಿ ಕುಮಾರ್

ಕೆ.ಆರ್.ಪೇಟೆ ಪುರಸಭೆಯ ನೈರ್ಮಲ್ಯ ವಿಭಾಗ ಮತ್ತು ಪರಿಸರ ವಿಭಾಗದ ಸಿಬ್ಬಂಧಿಗಳು ಅಂಗಡಿಗಳು ಮತ್ತು ಹೋಟೆಲ್ ಗಳ ಮೇಲೆ ಧಿಡೀರ್ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದರು..

ಪುರಸಭೆ ಮುಖ್ಯಾಧಿಕಾರಿ ಕುಮಾರ್ ಮಾತನಾಡಿ ಪ್ಲಾಸ್ಟಿಕ್ ಹ್ಯಾಂಡ್ ಕವರ್ ಗಳು, ಲೋಟಗಳು ಹಾಗೂ ಪ್ಯಾಕಿಂಗ್ ಕವರ್ ಗಳನ್ನು ವಶಪಡಿಸಿಕೊಂಡ ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ ಮತ್ತು ಆರೋಗ್ಯ ಪರಿವೀಕ್ಚಕ ಅಶೋಕ್ ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸಿದರೆ ಇಲ್ಲವೇ ಮಾರಾಟ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ದಾಳಿಯಲ್ಲಿ ಪುರಸಭೆ ಸಿಬ್ಬಂಧಿಗಳು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: