May 18, 2024

Bhavana Tv

Its Your Channel

ಪ್ರತಿಯೊಬ್ಬರು ಜಾಬ್ ಕಾರ್ಡ್ ಮಾಡಿಸಲು ಕರೆ

ನಾಗಮಂಗಲ; .ಪ್ರತಿಯೊಬ್ಬರು ಜಾಬ್ ಕಾರ್ಡ್ ಮಾಡಿಸಿಕೊಳ್ಳ ಮುಖಾಂತರ ಮುಂದಿನದಿನಗಳಲ್ಲಿ ಸರ್ಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಲು ಅವಕಾಶ ಇದೆಯೆಂದು ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್ ತಿಳಿಸಿದರು.

ಅವರಿಂದು ನಾಗಮಂಗಲ ತಾಲೂಕು ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಲೂಕಿನಲ್ಲಿ ಅಧಿಕೃತವಾಗಿ ಜಾಬ್ ಕಾರ್ಡ್ ಮೇಳವನ್ನು ಚಾಲನೆ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಇಂದು ಇಡೀ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿದ್ದು ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ನರೇಗಾ ಯೋಜನೆಯಡಿಯಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವಂತಹ ಅವಕಾಶಗಳು ಜಾಬ್ ಕಾರ್ಡ್ ಹೊಂದಿರುವAತಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿದರು

ನಾಗಮಂಗಲ ತಾಲೂಕಿನಲ್ಲಿ ಈ ಮೇಳದಿಂದ ಸುಮಾರು ೫೦೦೦ ಜಾಬ್ ಕಾರ್ಡ್ ಅಭಿಯಾನದಲ್ಲಿ ಪ್ರತಿ ಪಂಚಾಯಿತಿಯಿAದ ೧೦೦ ಜಾಬ್ ಕಾರ್ಡ್ ಒಟ್ಟು ೨೭ ಪಂಚಾಯತಿಗಳಿAದ ಅಭಿಯಾನವು ನಡೆಯಲಿದ್ದು ಇದರ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು .

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗಯ್ಯ ನರೇಗಾ ಸಹಾಯಕ ಅಭಿಯಂತರರಾದ ರವೀಂದ್ರ. ಗ್ರಾ .ಪಂ ಸದಸ್ಯರುಗಳಾದ ಭಾಗ್ಯಮ್ಮ. ಸಾವಿತ್ರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀತಾ ರವರು ಹಾಜರಿದ್ದರು.

ವರದಿ ; ದೇವಲಾಪುರ ಜಗದೀಶ್ ನಾಗಮಂಗಲ

error: