May 18, 2024

Bhavana Tv

Its Your Channel

ಆಡಳಿತ ನಿರ್ಲಕ್ಷದಿಂದ ಮುಂಜಾಗ್ರತೆ ವಹಿಸಿದರೆ ಕೊರೋನಾ ತಡೆಯಬಹುದಿತ್ತು ಚೆಲುವರಾಯಸ್ವಾಮಿ

ನಾಗಮಂಗಲ ; ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ ಕರೋನಾದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದು ಮುಂಜಾಗ್ರತೆ ವಹಿಸಿದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ಮಾಜಿ ಸಚಿವರಾದ ಚೆಲುವರಾಯಸ್ವಾಮಿ ಅವರು ತಿಳಿಸಿದರು .

ಅವರಿಂದು ನಾಗಮಂಗಲ ತಾಲೂಕಿನ ತುಪ್ಪದ ಮಡುಗ್ರಾಮ ಪಂಚಾಯಿತಿ ಕಾಂಗ್ರೆಸ್ ಸದಸ್ಯರಿಂದ ಅಂಗವಿಕಲರಿಗೆ ಆಹಾರ ಕಿಟ್ ವಿತರಿಸುತ್ತ ದೇಶವ್ಯಾಪಿ ಹರಡಿರುವ ಕರೋನಾ ಮುಂಜಾಗ್ರತೆ ಹಾಗೂ ಒಂದನೇ ಅಲೇಯಿಂದ ರೋಗ ನಿಯಂತ್ರಣ ಮಾಡಿದ್ದಾರೆ ಎರಡನೆಯ ಅಲೇ ಕಡಿಮೆಯಾಗುತ್ತಿತ್ತು ಆದರೆ ನಿರ್ಲಕ್ಷತೆ ಕಾರಣವಾಗಿದ್ದು ಮುಂದಿನ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವ ಮುಖಾಂತರ ಸಾಮಾಜಿಕ ಅಂತರ ನಿಯಮ ಪಾಲಿಸಿಕೊಂಡು ಜೀವದ ಬದುಕನ್ನು ಕಾಪಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ರಮೇಶ. ಕರಿಗೌಡ. ಗ್ರಾಮ ಪಂಚಾಯಿತಿ ಸದಸ್ಯರುಗಳು ಅನೇಕ ಮುಖಂಡರು ಹಾಜರಿದ್ದರು.

ವರದಿ ; ದೇವಲಾಪುರ ಜಗದೀಶ್ ನಾಗಮಂಗಲ

error: