May 3, 2024

Bhavana Tv

Its Your Channel

ಸಮಾಜದ ಎಲ್ಲಾ ಜನರಿಗೂ ಆರ್ಥಿಕ ಸಬಲತೆಗೆ ಧರ್ಮಸ್ಥಳ ಟ್ರಸ್ಟ್ ಮುಂದು- ಕೃಷ್ಣೇಗೌಡ

ನಾಗಮಂಗಲ .ಆ. ೨೪. ಸಮಾಜದ ಕಟ್ಟಕಡೆಯ ಜನರಿಗೂ ಆರ್ಥಿಕ ಸಬಲತೆ ಏಳಿಗೆಯ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮುಂಚೂಣಿಯಲ್ಲಿರುವುದು ಎಂದು ಕೃಷ್ಣೆಗೌಡ ಅಭಿಪ್ರಾಯಪಟ್ಟರು.

ಅವರಿಂದು ನಾಗಮಂಗಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಅವರುಗಳು ಕಚೇರಿಯಲ್ಲಿ ಸೇವಾ ಕೇಂದ್ರ ಹಾಗೂ ನವಜೀವನ ಪೋಷಕರ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪ್ರಸ್ತುತ ದಿನಗಳಲ್ಲಿ ಸರ್ಕಾರದ ಉದ್ದೇಶ ಯೋಜನೆಗಳನ್ನು ರೂಪಿಸಿದ್ದರು ಕಾರ್ಯಗತ ಮಾಡಲು ತಡವಾದರೂ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಜನರಿಗೆ ತಮ್ಮ ಸಂಸ್ಥೆಯಿAದ ಯೋಜನೆಗಳನ್ನು ರೂಪಿಸಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಬದುಕಿನ ಜೀವನದ ಸಬಲೀಕರಣ ಹಾಗೂ ಆರ್ದಿಕ ಸಬಲತೆಗೆ ಪ್ರಮುಖ ಧ್ಯೇಯವಾಗಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸಿ ಆರ್ದಿಕವಾಗಿ ಮುಂದೆ ಬರುತ್ತಿರುವುದು ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳೇ ಸಾಕ್ಷಿ ಎಂದು ತಿಳಿಸಿದರು.

ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ರಾಜ್ಯದ ಹಾಗೂ ಜಿಲ್ಲಾ ತಾಲೂಕು ಗಳಲ್ಲಿ ಸೇವಾ ಕೇಂದ್ರಗಳಿAದ ಜನರಿಗೆ ದೊರೆಯಬಹುದಾದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರವನ್ನು ಅನುಷ್ಠಾನ ಮಾಡುತ್ತಿರುವುದಾಗಿ ಜಿಲ್ಲಾ ನಿರ್ದೇಶಕರಾದ ಗಂಗಾಧರ ರೈ ಉದ್ಘಾಟನೆ ಮಾಡುತ್ತಾ ತಿಳಿಸಿದರು .

ಇದೇ ಸಮಾರಂಭದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಹೇಮಲತ ಹೆಗಡೆ ಜನಜಾಗೃತಿಯ ಸದಸ್ಯರಾದ ಮಂಜೇಶ್ . ಕಲೀಂ ಉಲ್ಲಾ ವಿನಯ್ ಕುಲಕರ್ಣಿ .ಭಾಸ್ಕರ್ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು

ದೇವಲಾಪುರ ಜಗದೀಶ್ ನಾಗಮಂಗಲ

error: