ವರದಿ: ದೇವಲಾಪುರ ಜಗದೀಶ್ ನಾಗಮಂಗಲ
ನಾಗಮAಗಲ .ಆ. ೨೪. ಸಮೃದ್ಧ ಸಮಾಜ ಆರೋಗ್ಯಕರ ಬೆಳವಣಿಗೆಗೆ ಅತಿ ಅವಶ್ಯಕವಾಗಿದೆ ಪ್ರತಿಯೊಬ್ಬ ಪ್ರಜೆಯೂ ಯೋಗವನ್ನು ಮಾಡುವ ಮುಖಾಂತರ ಆರೋಗ್ಯಕರ ಜೀವನ ಕಾಪಾಡಲು ಸಾಧ್ಯವೆಂದು ಅಭಿಯಾನದ ಮುಖ್ಯಸ್ಥರಾದ ಅಧ್ಯಕ್ಷರು ಶಿವಲಿಂಗಣ್ಣ ಅವರು ತಿಳಿಸಿದರು
ಅವರಿಂದು ನಾಗಮಂಗಲದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಆರೋಗ್ಯ ಸ್ವಯಂಸೇವಕರ ಅಭಿಯಾನವನ್ನು ಉದ್ಘಾಟಿಸಿ ಇಂದಿನ ಪರಿಸ್ಥಿತಿಯಲ್ಲಿ ಕೊರೋನ ಮಹಾಮಾರಿಯು ದೇಶದೆಲ್ಲೆಡೆ ವ್ಯಾಪಿಸಿದ್ದು ತಾವುಗಳು ತಮ್ಮ ಹಾಗೂ ತಮ್ಮ ಸಮಾಜದ ಆರೋಗ್ಯಕರಜೀವನ ನಡೆಸಲು ಆರೋಗ್ಯ ಸ್ವಯಂಸೇವಕರು ಗಳು ಅಭಿಯಾನದ ಉದ್ದೇಶವನ್ನು ತಿಳಿಸಬೇಕೆಂದು ಮಾತನಾಡಿದರು .
ಆರೋಗ್ಯ ಅಭಿಯಾನದ ಕಾಳಜಿಯ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗುವ ಮುಖಾಂತರ ಉತ್ತಮ ಆರೋಗ್ಯ ಸಮಾಜ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹಮೂರ್ತಿ ಜಿ ಗೌಡರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಭಿಯಾನ ನಾಗಮಂಗಲ ಮಂಡಲ ಕಾರ್ಯಗಾರ, ಅಭಿಯಾನದ ಮುಖ್ಯಸ್ಥರಾದ ಕಾಡ ಅಧ್ಯಕ್ಷರು ಶಿವಲಿಂಗಣ್ಣ, ಸುರೇಶ್ ಜಿಅವರು, ಮಂಡಲ ಅಧ್ಯಕ್ಷರಾದ ಶ್ರೀ ಸಿ.ಕೆ. ಸೋಮಶೇಖರ್ ನಾಗಮಂಗಲ ಪ್ರಭಾರಿಯಾದ ಡಾ!! ಸದಾನಂದಗೌಡಜೀರವರು,ಮಾಜಿ ಬಿಜೆಪಿ ಪಕ್ಷದ ಅಧ್ಯಕ್ಷರಾದ ಡಾಕ್ಟರ್ ವಿಷ್ಣುಮೂರ್ತಿ ಭಟ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ