ನಾಗಮಂಗಲ. ತಾಲೂಕಿನ ಬೆಳ್ಳೂರು ಪಟ್ಟಣದ ಬೆಟ್ಟೇಗೌಡ ಹಾಗೂ ಸುನಿತಾ ದಂಪತಿಗಳ ಸುಪುತ್ರ ಯೋಗ ಶಿಕ್ಷಕ ಕಿಶೋರ್ ರವರಿಗೆ ಶಿವಮೊಗ್ಗ ವರ್ಷಿಣಿ ಯೋಗ ಎಜುಕೇಶನ್ ಕಲ್ಚರ್ ಅಂಡ್ ಸ್ಫೋರ್ಟ್ಸ್ ಟ್ರಸ್ಟ್ ನ ವತಿಯಿಂದ ಯುವ ಯೋಗ ಸಾಧಕರನ್ನು ಗುರುತಿಸಿ ನೀಡುವ ಪ್ರಶಸ್ತಿಯನ್ನು ಸಂಸ್ಥೆಯ ಸಂಸ್ಥಾಪಕರಾದ ವೆಂಕಟೇಶ್ ಪರವರು ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ನಿವಾಸಿಯಾದ ಕಿಶೋರ್ ರವರಿಗೆ ಅತ್ಯುತ್ತಮ ಯೋಗ ಸಾಧಕ ಪ್ರಶಸ್ತಿಯನ್ನು ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ
ಚಿಕ್ಕ ವಯಸ್ಸಿನಲ್ಲೇ ಯೋಗಸಾಧನೆಯಲ್ಲಿ ತೊಡಗಿರುವ ಇವರು ತಾತ ಜವರಯ್ಯನವರ ಪ್ರೇರಣೆಯಿಂದ ಯೋಗ ಸಾಧನೆಗೆ ಮುಂದಾದ ಯುವಕ ಎಂ.ಬಿ.ಎ. ಪದವೀಧರನಾಗಿದ್ದು ಭದ್ರಾವತಿಯ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಕೇಂದ್ರ ಯೋಗಗುರು ಪಾಲಕ್ಷ ರವರ ಬಳಿ ಯೋಗ ತರಬೇತಿ ಪಡೆದಿದ್ದು ನಂತರ ಆದಿಚುಂಚನಗಿರಿ ಮಠ ಸಂಸ್ಥಾನದ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ಹಾಗಲವಾಡಿ ಇವರ ಬಳಿ ನಿರಂತರ ಯೋಗ ಕಲಿಕೆಯಲ್ಲಿ ತೊಡಗಿದ್ದಾರೆ
ಯೋಗಾಸನದ ವಿವಿಧ ಆಯಾಮಗಳನ್ನು ಕಲಿತಿರುವ ಈತ ರಾಜ್ಯ ವಿವಿಧ ಯೋಗ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಬೆಂಗಳೂರು ಪತಂಜಲಿ ಯೋಗ ಕೇಂದ್ರ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಶಿವಮೊಗ್ಗದಲ್ಲಿ ನಡೆದ ವರ್ಷಿಣಿ ಯೋಗ ಕೇಂದ್ರದ ರಾಷ್ಟ್ರಮಟ್ಟದ ಯೋಗಸಾಧನೆ ಮೂರನೇ ಸ್ಥಾನ ಬೆಂಗಳೂರಿನ ತ್ರೀಜಿ ಯೋಗ ಕಾರ್ಯಕ್ರಮದಲ್ಲಿ ಯೋಗ ರತ್ನ ಪ್ರಶಸ್ತಿ ಹಾಗೂ ಯೋಗ ಕಲಾನಿಧಿ. ಯೋಗ ಸಾಧಕ. ಉತ್ತಮ ಯೋಗಪಟು .ಪ್ರಶಸ್ತಿಗಳನ್ನು ಪಡೆದಿದ್ದಾರೆ
ಈ ಯುವ ಯೋಗ ಸಾಧಕ ಕಿಶೋರ್ ಅವರು ನಾಗಮಂಗಲ ತಾಲೂಕಿನ ಹಳ್ಳಿಗಾಡಿನ ಜನತೆಗೆ ಯೋಗದಿಂದ ರೋಗ ಮುಕ್ತ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಿದ್ದು ಬೆಳ್ಳೂರಿನ ಆದಿಚುಂಚನಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕರೋನವೈರಸ್ ರೋಗಿಗಳಿಗೆ ಹಾಗೂ ಶಾಲಾ. ಕಾಲೇಜು. ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ
ಕಿಶೋರ್ ಅವರು ಹೆಚ್ಚಿನ ರೀತಿಯಲ್ಲಿ ಯೋಗ ಸಾಧನೆ ಮಾಡಲಿ ಎಂಬುದೇ ಸ್ನೇಹಿತರು ಮತ್ತು ಸಾರ್ವಜನಿಕರ ಆಶಯವಾಗಿದೆ
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ