May 3, 2024

Bhavana Tv

Its Your Channel

ತೆಂಗು ಬೆಳೆಗಾರರ ಸಂಘಕ್ಕೆ ಶಾಸಕ ಸುರೇಶಗೌಡ ಬೆಂಬಲಿಗರ ಮೇಲುಗೈ

ನಾಗಮಂಗಲ:- ತಾಲೂಕಿನ ತೆಂಗು ಬೆಳೆಗಾರರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ೧೫ ಸ್ಥಾನಗಳಿಗೆ ಶಾಸಕ ಸುರೇಶಗೌಡ ಬೆಂಬಲಿತ ೧೨ ಜನ ನಿರ್ದೇಶಕರುಗಳು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದು ಪಟ್ಟಣದ ಶಾಸಕರ ಕಚೇರಿಯಲ್ಲಿ ಗೀತಾ ಸುರೇಶ್ ಗೌಡ ಹಾಗೂ ಸುಪುತ್ರಿ ಧನ್ಯತಾ ರವರು ನೂತನ ನಿರ್ದೇಶಕರು ಗಳನ್ನು ಅಭಿನಂದಿಸಿ ಸನ್ಮಾನಿಸಿದರು

ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾದ ಡಿ.ಟಿ. ಶ್ರೀನಿವಾಸಯ್ಯ ಮಾತನಾಡಿ ತಾಲೂಕಿನ ವ್ಯಾಪ್ತಿಯಲ್ಲಿ ಶಾಸಕ ಸುರೇಶ್ ಗೌಡ ರವರು ಉತ್ತಮ ರೀತಿ ಆಡಳಿತವನ್ನು ನಡೆಸುತ್ತಿದ್ದಾರೆ ಜನಪರ ಕೆಲಸಗಳನ್ನು ಮಾಡುತ್ತಿ ದ್ದಾರೆ ಎಂಬುದಕ್ಕೆ ಈ ಚುನಾವಣೆಯ ಸಾಕ್ಷಿಯಾಗಿದೆ ನಾಗಮಂಗಲ ತೆಂಗು ಬೆಳಗಾರರ ಸಹಕಾರ ಸಂಘದ ೧೫ ನಿರ್ದೇಶಕರ ಸ್ಥಾನಗಳಿಗೆ ೧೨ ಜನ ಸುರೇಶಗೌಡ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತರುತ್ತದೆ ಎಂದರು

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ನಾಯಕರೆಂದು ಕೆಲವರು ಗುರುತಿಸಿಕೊಂಡಿದ್ದಾರೆ ಆದರೆ ತಮ್ಮ ಸ್ವಕ್ಷೇತ್ರದಲ್ಲಿ ಸಣ್ಣಪುಟ್ಟ ಚುನಾವಣೆಯಲ್ಲಿ ಸೋಲುತ್ತಿರುವದು ನೀವೆಲ್ಲರೂ ಗಮನಿಸಬಹುದು ಇತ್ತೀಚಿಗೆ ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಾಲ್ಕು ಜನ ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ ಇದರಿಂದಲೆ ತಿಳಿಯುತ್ತದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತೆಂಗು ಬೆಳಗಾರರ ಸಂಘದ ನೂತನ ನಿರ್ದೇಶಕರುಗಳು ಜೆಡಿಎಸ್ ಮುಖಂಡರುಗಳಾದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಲಿAಗೇಗೌಡ. ಕುರುಬರ ಸಂಘದ ಅಧ್ಯಕ್ಷ ಬಸವೇಗೌಡ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಣ್ಣ. ಚಿಕ್ಕೋನಹಳ್ಳಿ ಮಂಜು. ಕೋಳಿ ರಾಮು. ಮುದ್ದಣ್ಣ .ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: