May 3, 2024

Bhavana Tv

Its Your Channel

ಡಾ ಮಹದೇವು ನಿರ್ಮಲಾನಂದ ಸ್ವಾಮೀಜಿರವರ ಬಳಿ ಕ್ಷಮೆ ಹೇಳುವವರೆಗೂ ನಿರಂತರ ಧರಣಿ- ಅಮ್ಮನಕಟ್ಟೆ ಬಸುರಾಜು

ನಾಗಮಂಗಲ:ಡಾ ಮಹದೇವು ಮೂರು ಬಾರಿ ರಾಜ್ಯ ಒಕ್ಕಲಿಗರ ಸಂಘಕ್ಕೆ ನಿರ್ದೇಶಕನಾಗಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ನೀವು ಸಮುದಾಯಕ್ಕೆ ನೀಡಿರುವ ಕೊಡುಗೆ ಏನು ನಿಮ್ಮ ಘನದಾರಿ ಕಾರ್ಯವೈಖರಿಯನ್ನು ನೋಡಿ ನಿಮ್ಮನ್ನ ಸೋಲಿಸಿ ಮನೆಗೆ ಕಳುಹಿಸಿರುವುದು ಉತ್ತಮ ಎನಿಸುತ್ತದೆ ಸೋತೆ ಎಂಬ ಹತಾಶೆ ಮನೋಭಾವನೆಯಿಂದ ಅರೆಹುಚ್ಚನಂತೆ ಮಾತನಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಿರಿ ತಕ್ಷಣ ಈ ವ್ಯಕ್ತಿ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರ ಬಳಿ ಕ್ಷಮೆ ಕೇಳದಿದ್ದರೆ ಕೇಳುವವರೆಗೂ ನಿರಂತರ ಧರಣಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗಿರದೆ ಪರಮಪೂಜ್ಯ ರವರು ಎಲ್ಲ ಜನಾಂಗ ಮತ್ತು ಎಲ್ಲಾ ರಾಜಕೀಯ ಪಕ್ಷದವರು ಆಶೀರ್ವಾದ ಪಡೆದು ಹೋಗುತ್ತಾರೆ ಮಹಾಸ್ವಾಮಿಗಳ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇದ್ದು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ತಿಳಿಸಿದರು

ತಾಲೂಕು ಒಕ್ಕಲಿಗರ ಸಂಘದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಅಮ್ಮನಕಟ್ಟೆ ಬಸುರಾಜುರವರು ನಮ್ಮ ಕ್ಷೇತ್ರದಲ್ಲಿ ಇರುವಂತಹ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಗ್ಗೆ ಒಬ್ಬ ವ್ಯಕ್ತಿ ಕೀಳು ಮನೋಭಾವನೆಯಿಂದ ಮಾತನಾಡುವಾಗ ಸಮುದಾಯದ ಒಂದು ಸಂಘ ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು
ವರದಿ: ಚಂದ್ರಮೌಳಿ ನಾಗಮಂಗಲ

error: