ನಾಗಮಂಗಲ:-ಆದಿಚುoಚನಗಿರಿ ಮಠಾಧೀಶರಾದ ಡಾ.ಶ್ರೀ.ಶ್ರೀ. ನಿರ್ಮಲಾನಂದನಾಥ ಸ್ವಾಮೀಜಿ ರವರ ಬಗ್ಗೆ ಮೈಸೂರಿನ ಡಾ ಮಹದೇವ ಲಘುವಾಗಿ ಮಾತನಾಡಿರುವುದು ಖಂಡನೀಯವಾಗಿದೆ ಈ ತಕ್ಷಣ ಬಹಿರಂಗ ಕ್ಷಮೆ ಕೇಳದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಮಾಜಿ ಸಂಸದ ಶಿವರಾಮೇಗೌಡ ರವರ ಸುಪುತ್ರ ಚೇತನಗೌಡ ಬೆಳ್ಳೂರು ಕ್ರಾಸ್ ಬಳಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರು
ಡಾ ಮಹಾದೇವರವರು ಚುಂಚಶ್ರೀರವರ ಬಗ್ಗೆ ಲಘುವಾದ ಹೇಳಿಕೆಯನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ ಮೂರು ಬಾರಿ ಒಕ್ಕಲಿಗ ಸಂಘಕ್ಕೆ ನಿಮ್ಮನ್ನು ಆಯ್ಕೆ ಮಾಡಿದರು ನಿಮ್ಮ ಕೊಡುಗೆ ಏನು ನಿಮ್ಮನ್ನ ಸಮುದಾಯದವರು ಮತ ನೀಡದೆ ಸೋಲಿಸುವುದು ನಿಮ್ಮ ಕಾರ್ಯವೈಖರಿಯ ಎಂತಹ ಸಾಧನೆ ಎಂಬುದನ್ನು ತೋರುತ್ತದೆ
ಡಾ ನಿರ್ಮಲಾನಂದ ಸ್ವಾಮೀಜಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ ಆದಿಚುಂಚನಗಿರಿ ಮಠ ಪಕ್ಷಾತೀತವಾಗಿ ಎಲ್ಲಾ ಪಕ್ಷದವರು ಕೂಡ ಮಹಾಸ್ವಾಮಿಗಳ ಆಶೀರ್ವಾದ ಪಡೆಯಲು ಬರುತ್ತಾರೆ ಚುಂಚಶ್ರೀ ರವರು ಯಾವುದೇ ಒಂದು ಪಕ್ಷ ಹಾಗೂ ಜನಾಂಗಕ್ಕೆ ಸೀಮಿತವಾಗಿಲ್ಲ ಶ್ರೀಕ್ಷೇತ್ರದಲ್ಲಿ ದಿನನಿತ್ಯವೂ ಅನ್ನದಾನ ,ವಿದ್ಯಾದಾನ. ನಡೆಯುತ್ತಿದ್ದು ನಡೆದಾಡುವ ದೇವರು ಎಂದೇ ಹೆಸರಾಗಿರುವ ನಮ್ಮ ಕುಲದೇವರ ಬಗ್ಗೆ ಮಾತನಾಡುವುದು ಖಂಡನೀಯವಾಗಿದೆ ನಾಗಮಂಗಲ ತಾಲೂಕಿನ ಸಮಸ್ತ ಜನತೆಯ ಪರವಾಗಿ ತಿಳಿಸಬಯಸುತ್ತೇನೆ ಈ ತಕ್ಷಣ ಬಹಿರಂಗ ಕ್ಷಮೆ ಕೇಳದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಪತ್ರಿಕಾಗೋಷ್ಠಿಯಲ್ಲಿ ಬಿದರಕೆರೆ ಗ್ರಾಮ ಪಂಚಾಯತಿ ಸದಸ್ಯ ಜೈಕುಮಾರ್. ತುರುಬನಹಳ್ಳಿ ಚೇತನ್ .ನಾಗೇಶ್. ನಾಗಣ್ಣ .ಹಾಗೂ ಚೇತನ್ ಗೌಡ ಅಭಿಮಾನಿ ಬಳಗದ ಮುಖಂಡರು ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ