April 27, 2024

Bhavana Tv

Its Your Channel

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ನಾಗಮಂಗಲ. ನಾಗಮಂಗಲ ತಾಲೂಕು ಕಚೇರಿ ಆವರಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಜಯಂತಿಯನ್ನು ಕರೋನವೈರಸ್ ಇರುವ ಹಿನ್ನೆಲೆ ತಾಲೂಕಾಡಳಿತ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು

ತಾಲೂಕು ದಂಡಾಧಿಕಾರಿ ಕುಂಜಿ ಅಹಮದ್ ರವರು ಜ್ಯೋತಿ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಿದರು

ದಲಿತ ಮುಖಂಡರಾದ ಕೃಷ್ಣಮೂರ್ತಿ ಶಿವಯೋಗಿ ಸಿದ್ದರಾಮೇಶ್ವರ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಮಹಾಪುರುಷ ಸಿದ್ಧರಾಮೇಶ್ವ ರವರಿಗೆ 800 ವರ್ಷಗಳ ಇತಿಹಾಸ ಇದೆ ಕೆರೆ ಕಟ್ಟೆಗಳನ್ನು ಕಟ್ಟಿ ಕಲ್ಲು ಕೆಲಸ ಮಾಡಿಕೊಂಡಿದ್ದ ಒಂದು ಸಮುದಾಯಕ್ಕೆ ಭದ್ರಬುನಾದಿ ಒದಗಿಸಿ ಕೊಟ್ಟಂತಹ ಅದಿಪುರುಷ ಶಿವಯೋಗಿ ಸಿದ್ದರಾಮೇಶ್ವರ ರವರು ಮೂಲತಃ ಮಹಾರಾಷ್ಟ್ರ ದವರು ತನ್ನ ಜನಾಂಗದ ಏಳಿಗೆಗಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಠಮಾನ್ಯಗಳನ್ನು ಸ್ಥಾಪಿಸಿ ಜನಸೇವೆ ಮಾಡಿದಂತಹ ಮಹಾನ್ ಪುರುಷ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕಾದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು

ಸರಳ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಕುಂಜಿ ಅಹಮದ್ ಸಮುದಾಯದ ಮುಖಂಡ ಟಿ.ಜಿ. ಮಹದೇವ್ (ಕನಕಪುರ ಬಂಡೆ) ಯದುನಂದನ. ಗಣೇಶ್. ಶ್ರೀನಿವಾಸ್. ಹಾಗೂ ಕಚೇರಿ ಸಿಬ್ಬಂದಿ ವರ್ಗ ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ

error: