ನಾಗಮಂಗಲ.ತಾಲೂಕಿನ ದೇವಲಾಪುರ ಹೋಬಳಿ ತೂಬಿನಕೆರೆ ಗ್ರಾಮದ ಸಣ್ಣ ಜೋಗಯ್ಯ ನವರ ಸುಪುತ್ರ ಟಿ.ಎಸ್.ಚಂದ್ರು ರವರಿಗೆ ಚೆನೈ ಏಷ್ಯನ್ ವೈದಿಕ ಸಾಂಸ್ಕೃತಿಕ ಸಂಶೋಧನಾ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ತಮಿಳುನಾಡು ಹೊಸೂರಿನ ಕ್ಲಾರೆಸ್ತ ಹೋಟೆಲ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರ್ ಪದವಿ ಪ್ರದಾನ ಮಾಡಲಾಯಿತು
ಡಾಕ್ಟರೇಟ್ ಪದವಿಗೆ ಭಾಜನರಾದ ಟಿ.ಎಸ್. ಚಂದ್ರುರವರು ತುಬಿನಕೆರೆ ಗ್ರಾಮದ ಹುಚ್ಚಮ್ಮ ದೇವಿ ದೇವಾಲಯದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದು ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಜೀರ್ಣೋದ್ದಾರ ಗೊಳ್ಳದ ಹತ್ತಾರು ದೇವಾಲಯಗಳಿಗೆ ಸರ್ಕಾರದ ವತಿಯಿಂದ ಅನುದಾನ ತಂದು ದೇವಾಲಯಗಳಿಗೆ ನೀಡಿದ್ದಾರೆ ಜೊತೆಗೆ ಸ್ವಂತ ಖರ್ಚಿನಿಂದ ಹತ್ತಾರು ಸಣ್ಣಪುಟ್ಟ ದೇವಾಲಯಗಳಿಗೆ ರಕ್ಷಾ ಪರಿಕರಗಳನ್ನು ನೀಡಿದ್ದಾರೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಉಪಯೋಗವಾಗಲೆಂದು ಪ್ರತಿವರ್ಷವೂ ಕೂಡ ಪುಸ್ತಕ ಹಾಗೂ ಶಾಲಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ ತಾಲೂಕಿನ ವ್ಯಾಪ್ತಿಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಡಾ ಚಂದ್ರು ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ವಾಗಿದ್ದರಿಂದ ಸ್ನೇಹಿತರು ಹಾಗು ವೃತ್ತಿ ಬಾಂಧವರಾದ ಶ್ರೀಧರ್. ಶೇಖರ್.ದಿಲೀಪ್. ಕಲಾ. ಶ್ವೇತಾ.ತೋಳಲಿ ಕೃಷ್ಣಮೂರ್ತಿ. ಮುಂತಾದವರು ಗೌರವಿಸಿ ಸನ್ಮಾನಿಸಿದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ