May 14, 2024

Bhavana Tv

Its Your Channel

ಕುಂದಾಪುರದ ಐವರು ಅಕ್ಕಿ ಕಳ್ಳರು ಅಂದರ್..!

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸರ್ಕಾರದ ಪಡಿತರ ಉಚಿತ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಕಳ್ಳರಾದ ಇಸ್ಮಾಯಿಲ್, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಜ್‌ನನ್ನು ಬಂಧಿಸಿದ್ದಾರೆ.ಕುಂದಾಪುರದ ತಾಲೂಕಿನ ಕೋಟೇಶ್ವರದ ಗೋದಾಮಿಗೆ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ನೇತೃತ್ವದಲ್ಲಿ ರೈಡ್ ಮಾಡಲಾಗಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 55 ಟನ್ ಅಕ್ಕಿಯನ್ನು, ಪೊಲೀಸರು ವಶಕ್ಕೆ ಪಡೆದಿದ್ದು, ಕಾರ್ಯಾಚರಣೆಯಲ್ಲಿ 2.75 ಲಕ್ಷ ನಗದು ಹಾಗು ಸ್ಥಳದಲ್ಲಿದ್ದ 3 ಕಾರುಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಅಕ್ಕಿ ಕಳ್ಳರು ಸರಕಾರದ ಉಚಿತ ಅಕ್ಕಿಯನ್ನು..ಸಂಗ್ರಹಿಸಿ ಪಾಲೀಶ್ ಮಾಡಿ ನಂತರ ಕೇರಳಕ್ಕೆ ಸಾಗಾಟ ಮಾಡುವ ದಂಧೆ ನಡೆಸುತ್ತಿದ್ದರು. ಆರೋಪಿಗಳು ಕುಂದಾಪುರದ ಮೂಡು ಗೋಪಾಡಿ ಮತ್ತು ಕೇರಳ ಮೂಲದವರಾಗಿದ್ದು, ಲಾರಿ ಸೇರಿ ಒಟ್ಟು ಒಂದು ಕೋಟಿ ರೂ.ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

error: