May 14, 2024

Bhavana Tv

Its Your Channel

ಕರ್ನಾಟಕ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆಯ ವತಿಯಿಂದ ನ್ರತ್ಯ ಶಿಕ್ಷಕಿ ಶ್ರೀಮತಿ ವಂದನಾ ರೈ ಯವರಿಗೆ ಅಭಿಮಾನದ ಸನ್ಮಾನ

ಕಾರ್ಕಳ ; ಬಜಗೋಳಿ ಯ ನಲ್ಲೂರಿ ನ ಹಮಣಿ ಬೆಟ್ಟಿನ ಸುಂದರ ಶೆಟ್ಟಿ ,ವನಜ ಶೆಟ್ಟಿ ದಂಪತಿಯ ಪುತ್ರಿ ಶ್ರೀಮತಿ ವಂದನಾ ರೈ ಬಜಗೋಳಿ ಪ್ರೌಢ ಶಾಲೆಯ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿ ಯಾಗಿದ್ದರು.ಎಸ್. ವಿ.ಟಿ.ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸೇರ್ಪಡೆ ಯಾಗಿ ನ್ರತ್ಯ ಯಕ್ಷಗಾಯನ ಸಂಗೀತ ,ನಾಟಕ, ಛದ್ಮವೇಷ, ಏಕಪಾತ್ರಾಭಿನಯ ದಲ್ಲಿ ತಾಲೂಕು ಜಿಲ್ಲಾಮಟ್ಟದ ಹಲವಾರು ಸ್ಪರ್ಧೆ ಹಾಗೂ ಟಿವಿ ರಿಯಾಲಿಟಿ ಶೋ ಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಕಳೆದ ಮೂರು ವರ್ಷಗಳಿಂದ ಕಾರ್ಕಳದ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕಿಯಾಗಿ ಶಾಲಾ ಸಾಂಸ್ಕ್ರತಿಕ ನಿರ್ದೇಶಕಿ ಯಾಗಿ ಶಾಲಾ ವಿದ್ಯಾರ್ಥಿ ಗಳ ಪ್ರತಿಭಾ ಪ್ರದರ್ಶನ ಕ್ಕೆ ಮತ್ತಷ್ಟು ಮೆರಗನ್ನು ನೀಡಿದ್ದರು.ಬಜಗೋಳಿ ಹಾಗೂ ಕಾರ್ಕಳ ದ ಮಯೂರಿ ನ್ರತ್ಯ ಶಾಲೆಯ ಮಕ್ಕಳ ನ್ರತ್ಯ ಮಕ್ಕಳ ಕಲಿಕೆಗೆ ಹೊಸ ದಿಕ್ಕನ್ನು ತೋರಿಸಿದರು. ಚಂದಿರ ನೇತಕೆ ಓಡುವ ನಮ್ಮ ಸಹಿತ ಹಲವು ಹಾಡಿಗೆ ನ್ರತ್ಯ ಅಭಿನಯದ ಮೂಲಕ ಹೆಜ್ಜೆ ಹಾಕಿ ಅಕ್ಷರ ಮಾಲೆ ಕಲಿಕೆಯನ್ನು ಅಭಿನಯದ ಮೂಲಕ ಪ್ರಸ್ತುತ ಪಡಿಸಿ ಮನವನ್ನು ಗೆದ್ದಿರುತ್ತಾರೆ. ಕೊರೊನಾ ಕಾಲದಲ್ಲಿ ನ್ರತ್ಯ ಅಭಿನಯದ ವಿಡಿಯೋ ಗಳನ್ನು ವಾಟ್ಸಾಪ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಮಕ್ಕಳು ಮನೆಯಲ್ಲಿ ಕಳಿಕೆಯನ್ನು ಮುಂದುವರಿಸಲು ನೆರವಾಗಿ ದ್ದಾರೆ.ನ್ರತ್ಯ ಶಿಕ್ಷಕಿ ಶ್ರೀಮತಿ ವಂದನಾ ರೈ ಯವರಿಗೆ ಅಭಿಮಾನದ ಸನ್ಮಾನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ದಿನಾಚರಣೆ ಯ ದಿನದಂದು ನಡೆಯಿತು.

error: