ಬ್ರಹ್ಮಾವರ: ತಾಲೂಕಿನಲ್ಲಿ ಮೊದಲ ದಿನದ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅನುಮತಿ ನೀಡಲಾಯಿತು.ಸರಿಯಾಗಿ ೧೦ ಗಂಟೆಗೆ ಪೊಲೀಸರು ಎಲ್ಲ ಕಡೆ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಿದರು.ಬ್ರಹ್ಮಾವರ ಮಾತ್ರವಲ್ಲದೆ ಬಾರಕೂರು, ಸಾಬ್ರಕಟ್ಟೆ, ಮಂದಾರ್ತಿ, ಶಿರೂರು ಹಾಗೆ ತಾಲೂಕಿನ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ಸೂಕ್ತ ಮಾರ್ಗದರ್ಶನದ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಗುರುನಾಥ.ಬಿ.ಹಾದಿಮನಿ ಮತ್ತು ಅವರ ತಂಡ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಕೈಗೊಂಡು ಮೊದಲ ದಿನದ ಲಾಕ್ ಡೌನ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈ ಬಗ್ಗೆ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಕಳೆದ ಏಪ್ರಿಲ್ ೨೪ ರಿಂದ ಈವರೆಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಮಾಸ್ಕ್ ಧರಿಸದ ೧೫೬ ಜನರಿಗೆ ಒಟ್ಟು ದಂಡ ೧೫೬೦೦,ಇತರ ಪ್ರಕರಣ ೬೩ ಜನ ಒಟ್ಟು ದಂಡ ೩೯೫೦೦ ಎಫ್.ಐ.ರ್ ೧೨ ಜನ ಹಾಗೂ ೧೨ ವಾಹನ ಗಳನ್ನು ಜಪ್ತಿ ಮಾಡಲಾಗಿರುತ್ತದೆ . ಈ ಬಗ್ಗೆ ಠಾಣಾಧಿಕಾರಿ ಗುರುನಾಥ. ಬಿ.ಹಾದಿಮನಿ ಅವರು ನಮ್ಮ ಮಾಧ್ಯಮಕ್ಕೆ ಮಾಹಿತಿ ನೀಡಿರುತ್ತಾರೆ.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ