April 29, 2024

Bhavana Tv

Its Your Channel

ಫೆ.26ಮತ್ತು 27 ಕ್ಕೆ 3ನೇ ವರ್ಷದ ಪಾದಯಾತ್ರೆ

ಬೈಂದೂರು:- ಸಿದ್ಧ ಸಮಾಧಿ ಯೋಗ ಬೈಂದೂರು ವಿಭಾಗದ ಧ್ಯಾನಿಗಳ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 3ನೇ ವರ್ಷದ ಪಾದಯಾತ್ರೆ ಇದೇ ಫೆಬ್ರವರಿ ದಿನಾಂಕ 26ಮತ್ತು 27 ಭಾನುವಾರ ಸೋಮವಾರ ಆಯೋಜಿಸಲಾಗಿದೆ.

ಹಿಂದೆ ಕೊಲ್ಲೂರಿಗೆ ಮಾತ್ರ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಈ ವರ್ಷದಿಂದ ವಿಶೇಷವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿಗೂ ವಿಸ್ತರಿಸಲಾಗಿದೆ. ದಿನಾಂಕ 27 ಭಾನುವಾರ ಮುಂಜಾನೆ 4ಗಂಟೆಗೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭವಾಗುವ ಪಾದಯಾತ್ರೆ ಭಜನೆ ಸಂಗೀತ ಸತ್ಸಂಗ ದ ಮೂಲಕ ಮದ್ಯಾಹ್ನ ಕೊಲ್ಲೂರು ತಲುಪುತ್ತದೆ. ಅಲ್ಲಿ ನದಿ ಸ್ನಾನ ಮಾಡಿ ದೇವರ ದರ್ಶನ ಪ್ರಸಾದ ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ. ಸಂಜೆ ಮುಕಾಂಬಿಕೆಯ ಸನ್ನಿಧಿಯಲ್ಲಿ ಭಜನೆ ಸತ್ಸಂಗ ಮುಗಿಸಿ ಅನ್ನಪ್ರಸಾದ ಸ್ವೀಕರಿಸಿ ಕ್ಷೇತ್ರದಲ್ಲೇ ವಿಶ್ರಾಂತಿ ಪಡೆದು. 27 ಸೋಮವಾರ ಮುಂಜಾನೆ 4ಗಂಟೆಗೆ ಪುನಃ ಪಾದಯಾತ್ರೆ ಮಾರಣಕಟ್ಟೆಗೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ 9ಕ್ಕೆ ಬ್ರಹ್ಮಲಿಂಗೇಶ್ವರನ ಸನ್ನಿಧಿ ತಲುಪಿ ಅಲ್ಲಿ ದೇವರ ದರ್ಶನ ಭಜನೆ ಸತ್ಸಂಗ ಮತ್ತು ದೇವರ ಪ್ರಸಾದ ಸ್ವೀಕರಿಸಿ ಮನೆಗಳಿಗೆ ಮರಳಲಿದ್ದಾರೆ.ಪಾದಯಾತ್ರಿಕರಿಗೆ ದಾರಿಮದ್ಯೆ ನೀರು ಫಲಾಹಾರ ತುರ್ತು ಚಿಕಿತ್ಸೆಯನ್ನು ಸಿದ್ದ ಸಮಾಧಿ ಯೋಗದ ಧ್ಯಾನಿಗಳು ವಹಿಸಿಕೊಳ್ಳುತ್ತಾರೆ

ಪಾದಯಾತ್ರೆಗೆ ಎಲ್ಲಾ ಭಕ್ತಾದಿಗಳಿಗೆ ಯೋಗ ಶಿಕ್ಷಕರಾದ ಆಚಾರ್ಯ ಕೇಶವಜೀ ಬೆಳ್ನಿ ಇವರು ಆತ್ಮೀಯವಾಗಿ ಸ್ವಾಗತಿಸಿರುತ್ತಾರೆ.

error: