April 29, 2024

Bhavana Tv

Its Your Channel

ಪುರಸಭೆ ವ್ಯಾಪ್ತಿಯ ರಸ್ತೆ ದುರಸ್ತಿ ಖಂಡಿಸಿ ಹೊಂಡಗಳಿರುವ ರಸ್ತೆಯಲ್ಲಿ ವಿನೂತನ ರೀತಿಯ ಬೈಕ್ ರ‍್ಯಾಲಿ

ಕಾರ್ಕಳ ಬ್ಲಾಕ್ ಕಾಂಗ್ರೇಸ್,ನಗರ ಕಾಂಗ್ರೆಸ್,ಯುವ ಕಾಂಗ್ರೆಸ್ ವತಿಯಂದ ಪುರಸಭೆಯ ವ್ಯಾಪ್ತಿಯ ರಸ್ತೆ ದುರಸ್ತಿ ಖಂಡಿಸಿ ಹೊಂಡಗಳಿರುವ ರಸ್ತೆಯಲ್ಲಿ ವಿನೂತನ ರೀತಿಯ ಬೈಕ್ ರಾಲಿ .

ಬೈಕ್ ರಾಲಿ ಯಲ್ಲಿ ಸುಮಾರು ೨೨ಬೈಕ್ ಗಳು ಪಾಲ್ಗೊಂಡಿದ್ದರು ಸುಮಾರು ಐದಾರು ತಿಂಗಳಿನಿAದ ಗಾಂಧಿ ಮೈದಾನ ರಸ್ತೆ , ಹೋಟೆಲ್ ಕಾಮಧೇನು ರಸ್ತೆಯ ಮುಂಭಾಗ ರಸ್ತೆ,ಮನ್ನಾಗೋಪುರ ಮುಂಭಾಗ ರಸ್ತೆ ತೀರಾ ಹೊಂಡಗಳಿAದ ಕೂಡಿದ್ದು ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿ ಗಳಿಗೆ ನಡೆದುಕೊಂಡು ಹೋಗಲೂ ತೊಂದರೆಯಾಗುತ್ತಿದೆ. ಕಾರ್ಕಳ ಪುರಸಭೆ ತೀರಾ ನಿರ್ಲಕ್ಷ ವಹಿಸುತ್ತಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿದರು.ನಂತರ ಮಾತನಾಡಿದ ಪುರಸಭಾ ಸದಸ್ಯ ಅಷ್ಪಕ ಅಹಮ್ಮದ್ ಕಾರ್ಕಳ ಪುರಸಭೆ ಪ್ರತೀ ವರ್ಷ ಶೇಕಡಾ ೧೫ರಷ್ಟು ತೆರಿಗೆಯನ್ನು ಜನರಿಂದ ವಸೂಲಿ ಮಾಡುತ್ತದೆ ,ಆ ತೆರಿಗೆ ಹಣ ಎಲ್ಲಿ ಹೋಯಿತು ಎಂದು ಹೇಳಿದರು. ನಂತರ ಬೈಕ್ ರಾಲಿಗೆ ಶುಭದ ರಾವ್ ಚಾಲನೆ ನೀಡಿದರು. ಮೊದಲು ಬಂದ ಮೂರು ಬೈಕ್ ಗಳಿಗೆ ಪ್ರಶಸ್ತಿ ಹಾಗೂ ನೋವು ನಿವಾರಕ ಮೂವ್ ಸ್ಪ್ರೇ ಯನ್ನ ನೀಡಲಾಯಿತು. ಪುರಸಭಾ ಸದಸ್ಯರಾದ ಸೋಮನಾಥ ,ಪ್ರತಿಮಾ ರಾಣೆ,ಪ್ರಧಾನ ಕಾರ್ಯದರ್ಶಿ ಶುಷಾಂತ ಸುಧಾಕರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನಿತಾ ಡಿ ಸೋಜ ,ರಹಮತ್ತುಲ್,ಪ್ರಭಾಕರ ಭಂಗೇರ ಯೋಗೀಶ್ ಇನ್ನ, ಸತೀಶ,ಕೃಷ್ಣ ಶೆಟ್ಟಿ ಬಜಗೋಳಿ ವಿಜಯಕುಮಾರ್,ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವರದಿ ಅರುಣ್ ಭಟ್ ಕಾರ್ಕಳ.

error: