April 29, 2024

Bhavana Tv

Its Your Channel

ಕಾರ್ಕಳ ಪುರಸಭೆಯ ಮಾಸಿಕ ಸಭೆ

ಕಾರ್ಕಳ,ಪುರಸಭಾ ಮಾಸಿಕ ಸಭೆ ದಿನಾಂಕ ಸೋಮವಾರ ಪುರಸಭಾ ಭವನದಲ್ಲಿ ಸುಮಾಕೇಶವ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.ಕಾರ್ಕಳ ಪುರಸಭಾ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್ ಪಕ್ಷದ ಸದಸ್ಯರು ಪುರಸಭಾ ಮಾಸಿಕ ಸಭೆಯಲ್ಲಿ ಧರಣಿ ನಡೆಸಿದರು.ವಿಪಕ್ಷ ಮುಖಂಡ ಅಷ್ಪಕ ಅಹಮದ್ ನೇತೃತ್ವದಲ್ಲಿ ಧರಣಿ ನಡೆಸಿದ ವಿಪಕ್ಷ ಸದಸ್ಯರು ಒಳ ಚರಂಡಿ ಕಾಮಗಾರಿ ತೀರಾ ಅವೈಜ್ಞಾನಿಕ ರೀತಿಯಲ್ಲಿ ನಡೆಸಿರುವುದರಿಂದ ರಸ್ತೆ ಗುಂಡಿಗಳಿAದ ತುಂಬಿ ಹೋಗಿದ್ದು ,ಈ ಬಗ್ಗೆ ಹಲವು ಬಾರಿ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಇದನ್ನು ಸರಿಪಡಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ನಂತರ ಮಾತನಾಡಿದ ಪುರಸಭಾ ಸದಸ್ಯ ಶುಭಾಧರಾವ್ ಮಾತನಾಡಿ ಕಾರ್ಕಳ ಮುಖ್ಯ ರಸ್ತೆ ಮಣ್ಣ ಗೋಪುರ ರಸ್ತೆ,ಮೂರು ಮಾರ್ಗ ರಸ್ತೆ ಮಣ್ಣ ಗೋಪುರ ರಸ್ತೆ ಮಂಗಳೂರು ರಸ್ತೆ ಇನ್ನು ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು.
ಸದಸ್ಯರಾದ ವಿನ್ನಿ ಬೋಲ್ಡ್ , ರೆಹಮತ ಎನ್.ಶೇಖ್ , ಸೋಮನಾಥ ನಾಯ್ಕ ಪ್ರತಿಮಾ ರಾಣೆ,ನಳಿನಿ ಆಚಾರ್ಯ , ಹರೀಶ್ ದೇವಾಡಿಗ ಪ್ರಭಾ ಕಿಶೋರ್ ದ್ವನಿ ಗೂಡಿಸಿದರು.ನಂತರ ಮಾತನಾಡಿದ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಅಕಾಲಿಕ ಮಳೆಯಿಂದಾಗಿ ರಸ್ತೆ ದುರಸ್ತಿ ಕಾಮಗಾರಿ ಮಾಡಲು ನಿಗದಿತ ಸಮಯದಲ್ಲಿ ತೊಂದರೆಯಾಗುತ್ತಿದೆ. ಸಂಬAಧಪಟ್ಟ ಗುತ್ತಿಗೆದಾರರಿಗೆ ಈ ಕುರಿತು ಗಮನ ಹರಿಸಲಾಗಿದೆ ಎಂದು ತಿಳಿಸಿದರು.ಅಂತೂ ಇಂತೂ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಚಾಲಕರ ದ್ವಿಚಕ್ರ ವಾಹನಗಳ ಗೋಳು ತಪ್ಪಿದ್ದಲ್ಲ ಸಾರ್ವಜನಿಕರು ರಸ್ತೆಯಲ್ಲಿ ಹೋಗುವಂತಿಲ್ಲ . ಪ್ರತೀ ಪುರಸಭೆಯ ಮಾಸಿಕ ಸಭೆಯಲ್ಲಿ ಇದೇ ವಿಷಯ ದಲ್ಲಿ ಚರ್ಚೆಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಹಾಗೂ ಸ್ಥಾಯಿ ಸಮಿತಿಯ ಸದಸ್ಯ ಲಕ್ಷ್ಮಿ ನಾರಾಯಣ ಮಲ್ಯ , ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: