April 29, 2024

Bhavana Tv

Its Your Channel

ಕಾರ್ಕಳ ಉತ್ಸವ, ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟನೆ ಸಚಿವ ಸುನಿಲ್ ಕಾರ್ಯ ಮಾದರಿ: ವೀರಪ್ಪ ಮೊಯಿಲಿ

ಕಾರ್ಕಳ: ಕಾರ್ಕಳ ಉತ್ಸವದ ಮೂಲಕ ಜೀವನೋತ್ಸಾಹ ತುಂಬುವ ಮಾದರಿ ಕಾರ್ಯವನ್ನು ಸಚಿವ ವಿ.ಸುನಿಲ್ ಕುಮಾರ್ ಮಾಡಿದ್ದಾರೆ. ಅವರ ಈ ಕಾರ್ಯ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಂ ವೀರಪ್ಪ ಮೊಯಿಲಿ ಹೇಳಿದರು

ಕಾರ್ಕಳ ಉತ್ಸವದ ಪ್ರಯುಕ್ತ ಸ್ವರಾಜ್ ಮೈದಾನದಲ್ಲಿ 10 ನೇ ದಿನದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಕಾರ್ಕಳ ಉತ್ಸವಕ್ಕೆ ಆಹ್ವಾನಿಸಿ, ನನ್ನನ್ನು ಗೌರವಿಸಿರುವುದರಿಂದ ಅತಿ ಸಂತಸವಾಗಿದೆ ಸುನಿಲರ ಪ್ರೀತಿಯಿಂದ ಮನಸ್ಸು ತುಂಬಿ ಬಂದಿದೆ. ಕೋವಿಡ್ ನಿಂದ ನೊಂದಿದ್ದ ಜೀವಗಳಿಗೆ ಉತ್ಸವದ ಮೂಲಕ ಮರು ಜೀವನೋತ್ಸಹ ತುಂಬುವ ಸುನಿಲ್ ರವರ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಜನರಲ್ಲಿ ಸ್ಪೂರ್ತಿ, ಉತ್ಸಾವ ತುಂಬಿದರೆ ಮಾತ್ರ ಸುತ್ತಲ ಪರಿಸರದ ಜನ ಚೈತನ್ಯದಿಂದಿರಲು ಸಾಧ್ಯ.ಜೀವನೋತ್ಸವದ ನಿರಂತತೆ ಅಧ್ಬುತ ಶಕ್ತಿ ಎಂದು ಅವರು ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ . ವೈರಸ್ ನಿಂದ ಇಡೀ ಕರುನಾಡ ಸಂಕಷ್ಟದಲ್ಲಿರುವ ವೇಳೆ ಎರಡೆರಡು ಖಾತೆಯ ಹೊಣೆಗಾರಿಕೆ ಇರುವಾಗ ಸುನೀಲರು ಇಡೀ ನಾಡಿನ ಗಮನ ಸೆಳೆಯುವ ರೀತಿ ಗತ ವೈಭವವನ್ನು ನೆನಪಿಸುವ ರೀತಿ ಕಾರ್ಯಕ್ರಮ ಹಮ್ಮಿಕೊಂಡು ನಾಡಿಗೆ ಮಾದರಿ ಆಗಿದ್ದಾರೆ ಎಂದರು. ಎಲ್ಲ ಶಾಸಕರು, ಸಚಿವರು ತಮ್ಮ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುವಂತೆ ಆಗಬೇಕು. ಅದರಲ್ಲೂ ಸುನಿಲ್ ರಾಜಕೀಯ, ಜಾತಿ, ಧರ್ಮ ಎಲ್ಲವನ್ನು ಬದಿಗೊತ್ತಿ ವೈಚಾರಿಕತೆ ದ್ರಷ್ಟಿಯಿಂದ ಎಲ್ಲರನ್ನು ಒಂದಾಗಿ ಕೊಂಡು ಹೋಗುವ ಅವರ ಕಾರ್ಯಕ್ಕೆ ಮೆಚ್ವುಗೆ ವ್ಯಕ್ತಪಡಿಸಿದರು. ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ. ವಿ.ಸುನಿಲ್ ಕುಮಾರ್ , ಮಟ್ಟಾರು ರತ್ನಾಕರ ಹೆಗ್ಡೆ, ಎಂ.ಕೆ ವಿಜಯಕುಮಾರ್, ಸುಬ್ರಾಯ ಪೈ. ಭಾಸ್ಕರ್ ವಿ. ಉಪಸ್ಥಿತರಿದ್ದರು. ಸಂಗಿತ ಕುಲಾಲ್ ನಿರೂಪಿಸಿದರು.

error: