April 29, 2024

Bhavana Tv

Its Your Channel

ಕಾರ್ಕಳದ ಹಿತೈಷಿ ಸಂಸ್ಥೆಯಿOದ ಸಮಾಜದ ಮೂವರು ಸಾಧಕರಿಗೆ ಅಭಿನಂದನಾ ಸಮಾರಂಭ

ಕಾರ್ಕಳ: ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ನ್ಯೂನತೆಗಳನ್ನು ಸರಿಪಡಿಸುವವನೇ ನಿಜವಾದ ಶಿಕ್ಷಕ ಎಂದು ಪಡುತಿರುಪತಿ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ ಜಯರಾಮ ಪ್ರಭು ಹೇಳಿದರು.
ಅವರು ಕಾರ್ಕಳದ ಹಿತೈಷಿ ಸಂಸ್ಥೆಯು ಸಮಾಜದ ಮೂವರು ಸಾಧಕರನ್ನು ಅಭಿನಂದಿಸುವ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಆರ್ಮೋಡ ಇನ್ಶೂರೆನ್ಸ್ ಕಂಪನಿಯ ನಿವೃತ್ತ ಉದ್ಯೋಗಿ ಕೆ ಕಮಲಾಕ್ಷ ಕಾಮತ್ ಹಿತೈಷಿ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ಸೂಚಿಸಿದರು. ಊರಿನ ಜನಪ್ರಿಯ ಶಿಕ್ಷಕ ಕೆ ಪಾಂಡುರAಗರಾವ್, ಖ್ಯಾತ ವೈದ್ಯ ಡಾ. ರಾಮಚಂದ್ರ ಜೋಷಿ, ರಾಷ್ಟ್ರಮಟ್ಟದ ಪ್ರಶಸ್ತಿಗಳಿಸಿದ ಉದ್ಯಮಿಗಳಾದ ಕೆ ಗಣೇಶ್ ಕಾಮತ್ ಮತ್ತು ಶ್ರೀಮತಿ ರೇಖಾ ಗಣೇಶ್ ಕಾಮತ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿತೈಷಿ ಅಧ್ಯಕ್ಷ ಕೆ ಗಣಪತಿ ಕಾಮತ್ ಸ್ವಾಗತಿಸಿ, ಸುವರ್ಣ ಆರ್. ನಾಯಕ್ ವಂದಿಸಿದರು. ಹಿತೈಷಿ ಕಾರ್ಯದರ್ಶಿ ಸತ್ಯನಾರಾಯಣ ಪ್ರಭು ಉಪಸ್ಥಿತರಿದ್ದರು. ಎಂ ದೇವದಾಸ ಶೆಣೈ, ಡಾ. ಸುಮಂತ ಜೋಷಿ ಮತ್ತು ಕೆ ಅರುಣ್ ಪುರಾಣಿಕ್ ಸನ್ಮಾನಿತರನ್ನು ಪರಿಚಯಿಸಿದರು. ಆರ್ ನಾರಾಯಣ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: