May 18, 2024

Bhavana Tv

Its Your Channel

ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿದ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ

ಕಾರ್ಕಳ:- ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷರು ಪ್ರಸಾದ್ ದೇವಾಡಿಗರ ಮುಂದಾಳತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲದ ಸದಸ್ಯೆ ರತಿಯವರ ಬಿದ್ದು ಕೈಮೂಳೆ ಮುರಿದು ವೈದ್ಯಕೀಯ ಚಿಕಿತ್ಸೆಯ ಬಾಬ್ತು ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸದಸ್ಯರಿಂದ ಸಂಗ್ರಹವಾದ ಧನಸಹಾಯದ ರೂ 5000/ ಮೊತ್ತವನ್ನು ಆದಿತ್ಯವಾರ ರತಿಯವರ ಮನೆಯಲ್ಲಿ ಹೋಗಿ ಹಸ್ತಾಂತರಿಸಿ ಸಹಕರಿಸಲಾಯಿತು..

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಸುವರ್ಣ, ಕಾರ್ಯದರ್ಶಿ ದಿನೇಶ್ ಕೊರಳಕೋಡಿ, ಕೋಶಾಧಿಕಾರಿ ಪ್ರಸನ್ನ ರಾವ್,ರಾಜೇಂದ್ರ, ಹಿರಿಯ ಸಲಹೆಗಾರರು ಹೆನ್ರಿ ಸಾಂತ್ ಮಯೋರ್ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು

ವರದಿ; ಅರುಣ ಭಟ್ ಕಾರ್ಕಳ

error: