May 16, 2024

Bhavana Tv

Its Your Channel

ಗಣೇಶೋತ್ಸವದಿಂದ ಗಳಿಸಿದ ಹಣವನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೀಡುತ್ತಿದ್ದೇವೆ-ಶುಭೋದ ರಾವ್

ಕಾರ್ಕಳ:-ಕಾರ್ಕಳ ಬಸ್ ಸ್ಟ್ಯಾಂಡ್ ಸಾರ್ವಜನಿಕ ೧೫ನೇ ವರ್ಷದ ಗಣೇಶೋತ್ಸವ ವನ್ನು ನಾವು ಸರ್ವಧರ್ಮದವರೊಂದಿಗೆ ಆಚರಿಸುತ್ತಿದ್ದೇವೆ. ಇದರಿಂದ ಗಳಿಸಿದ ಹಣವನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೀಡುತ್ತಿದ್ದೇವೆ.

ಈ ಆಚರಣೆ ಭಕ್ತಿ ಪೂಜೆಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎರಡು ದಿನಗಳ ಗಣೇಶೋತ್ಸವ ಆಚರಿಸಿ, ನಾಳೆ ಮಧ್ಯಾಹ್ನದ ನಂತರ ಭವ್ಯ ಮೆರವಣಿಗೆ ಮೂಲಕ ರಾಮಸಮುದ್ರದಲ್ಲಿ ಬಿಂಬವನ್ನು ವಿಸರ್ಜನೆ ಮಾಡುತ್ತೇವೆ ಎಂದು ಗೌರವ ಸಲಹೆಗಾರರಾದ ಶುಭೋದ ರಾವ್ ಮಾಧ್ಯಮಕ್ಕೆ ತಿಳಿಸಿದರು.
ವರದಿ: ಅರುಣ ಭಟ್ ಕಾರ್ಕಳ

error: