April 29, 2024

Bhavana Tv

Its Your Channel

ಬ್ಯಾಗ್ ವಿತರಣಾ ಕಾರ್ಯಕ್ರಮ

ಕಾರ್ಕಳ:- ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ).ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ). ಪತ್ತೊಂಜಿಕಟ್ಟೆ,ಪೆವಾ9ಜೆ, ಕಾರ್ಕಳ. ಇದರ ವತಿಯಿಂದ ಸ್ವಾತಂತ್ರ‍್ಯದ ಅಮೃತಮಹೋತ್ಸವ ಅಂಗವಾಗಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜೋಗಲ್ ಬೆಟ್ಟುವಿನಲ್ಲಿ ಬ್ಯಾಗ್ ವಿತರಣಾ ಕಾರ್ಯಕ್ರಮ ಜರುಗಿತು.

ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ದೇವಾಡಿಗ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆಯಾದ ಅಮೃತಾ ಭಾಸ್ಕರ್ ಶೆಟ್ಟಿ ಮಕ್ಕಳಿಗೆ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರೇಖಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ, ಭಾಗ್ಯ ಜ್ಯೋತಿ ,ಶಾಲಾಭಿಮಾನಿ ನಾರಾಯಣ ರಾವ್, ರೋಟರ್ ಆಕ್ಟ್ ಅಧ್ಯಕ್ಷರಾದ ಶಂಕರ್ ಕುಡ್ವ, ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ, ಯುವಕ ಮಂಡಲದ ಕಾರ್ಯದರ್ಶಿ ದಿನೇಶ್ ಕೊರಳಕೋಡಿ, ಮಹಿಳಾ ಮಂಡಲದ ಕಾರ್ಯದರ್ಶಿ ವೀಣಾ ರಾಜೇಶ್, ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾದಿಕಾರಿಗಳು, ಸದಸ್ಯರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: