May 16, 2024

Bhavana Tv

Its Your Channel

ಕಂದಾಯ ಇಲಾಖೆ ಹಾಗೂ ತಾಲೂಕ ಆಡಳಿತ ಕಾರ್ಕಳ ವತಿಯಿಂದ ಮರ್ಣೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಕಾರ್ಕಳ ; ಗ್ರಾಮದ ಮೂಲ ಸೌಕರ್ಯ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರವು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಕಾರ್ಕಳ ತಾಲೂಕಿನ ಮರ್ಣೆ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ದಲ್ಲಿ ಭಾಗವಹಿಸಿ ಮಾತನಾಡಿದರು.

ಕಂದಾಯ ದಾಖಲಾತಿಗಳು ಭದ್ರವಾಗಿರಿಸುವ ಸಲುವಾಗಿ ಸರಕಾರವು ಡಿಜಿಟಲಿಕರಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಬಿಪಿ ಎಲ್ ಕಾರ್ಡ್ಗಾಗಿ 1000 ಅರ್ಜಿಗಳು ಬಂದಿದ್ದು 400 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲಾಗಿದೆ . ಫೆಬ್ರವರಿ ತಿಂಗಳಲ್ಲಿ ಬಾಕಿ ಉಳಿದ ಎಲ್ಲಾ ಪಡಿತರ ಚೀಟಿ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದರು .ರಾಜ್ಯ ಸರಕಾರವು ಈಗಾಗಲೆ ಪಿಂಚಣಿ ಯೋಜನೆ, ಮಾಶಾಸನವನ್ನು ವಿತರಿಸಲಾಗುತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು

ಗ್ರಾಮಸ್ಥ ಕೃಷ್ಣ ನಾಯ್ಕ್ ಪಂಚಾಯತ್ ಆವರಣದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸುವಂತೆ ತಹಶಿಲ್ದಾರರಿಗೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅಜೆಕಾರು ಪಂಚಾಯತ್ ಅಧಿಕಾರಿ ತಿಲಕ್ ರಾಜ್ ಮಾತನಾಡಿ ಈಗಾಗಲೇ ನಿಟ್ಟೆ ತಾಂತ್ರಿಕ ಕಾಲೇಜಿನ ಅಧ್ಯಯನ ತಂಡವು ಆಗಮಿಸಿ ಪರೀಕ್ಷೆಗೆ ಒಳಪಡಿಸಿ ಮಾಹಿತಿ ನೀಡಲಿದೆ. ಮಾಹಿತಿ ಅಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯತ್ ಗೆ ಸಂಬoಧಿಸಿ 28 ಅರ್ಜಿಗಳು ಕಂದಾಯ ಇಲಾಖೆಯ 29 ಅರ್ಜಿಗಳನ್ನು ಸ್ಥಳ್ಲ್ಲಿಯೆ ವಿಲೇವಾರಿ ಮಾಡಲಾಯಿತು . ಬಾಕಿ ಉಳಿದ 9 ಅರ್ಜಿಗಳನ್ನು ಸದ್ಯದಲ್ಲೇ ಪರಿಹರಿಸುವುದಾಗಿ ತಹಶಿಲ್ದಾರ್ ಭರವಸೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಣೆ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ ವಹಿಸಿದ್ದರು.
ಮುದ್ರಾಡಿಯ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯ ಆಮಂತ್ರಣದ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಸಭೆಯಲ್ಲಿ ಕಂದಾಯ ಇಲಾಖೆ ಪಂಚಾಯತ್‌ರಾಜ್ ಇಲಾಖೆ, ಭೂಮಾಪನ, ಮೆಸ್ಕಾಂ, ಅರಣ್ಯ, ಕೃಷಿ, ಸೇರಿದಂತೆ ವಿವಿಧ ಅಧಿಕಾರಿಗಳು ಗ್ರಾ.ಪಂ ಉಪಾಧ್ಯಕ್ಷ ಕುರುಂಬಿಲ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಗ್ರಾಮ ಪಂಚಾಯತ್ ಅಧಿಕಾರಿ ತಿಲಕ್ ರಾಜ್ ಸ್ವಾಗತಿಸಿದರು. ಗ್ರಾ.ಪಂ .ಸದಸ್ಯ ರಾಘವೇಂದ್ರ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವರದಿ: ಅರುಣ ಭಟ್ ಕಾರ್ಕಳ

error: