ಮುಂಡಗೋಡ: ಅರ್ಜಿ ಸಲ್ಲಿಸಿ ೮ ವರ್ಷವಾದರೂ ಜಿ.ಪಿ.ಎಸ್ ಕಾರ್ಯ ಪೂರ್ತಿಗೊಳ್ಳದಿರುವುದು, ಸಾಗುವಳಿ ಕ್ಷೇತ್ರದ ವ್ಯಾಪ್ತಿ ಜಿ.ಪಿ.ಎಸ್ ಸರ್ವೇ ಜರುಗಿಸದೇ ಒಕ್ಕಲೆಬ್ಬಿಸುತ್ತಿರುವದು, ಕಾನೂನು ಬದ್ಧ ಮಾನ್ಯತೆ ಹೊಂದಿರುವ ವಿಧಾನದಿಂದ ಜಿ.ಪಿ.ಎಸ್ ಗಡಿ ನಿರ್ದಿಷ್ಟ ಪಡಿಸದೇ ಇರುವದರಿಂದ ಸಾಗುವಳಿ
ಕ್ಷೇತ್ರಕ್ಕೆ ಸಂಬoಧಿಸಿ ಪುನಃ ಜಿ.ಪಿ.ಎಸ್ ಸರ್ವೇ ಮಾಡಲು ಅಗ್ರಹಿಸಿ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಕಾರವಾರಕ್ಕೆ ಇಂದು ಸಾವಿರಾರು ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲಿಸಲು ಕೋರಿ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮೇಲ್ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರುಗಿದ ಮೇಲ್ಮನವಿ ಅಭಿಯಾನದಲ್ಲಿ ತಾಲೂಕಾ ಅಧ್ಯಕ್ಷ ಶಿವಾನಂದ ಜೋಗಿ, ಶಿವಯ್ಯ ಹಿರೇಮಠ, ರಾಮು ಗೌಳಿ, ವಿರಭದ್ರ, ಮಲ್ಲಿಕಾರ್ಜುನ, ಅಬ್ದುಲ್ ತಿಳವಳ್ಳಿ ಮುಂತಾದವರುಭಾಗವಹಿಸಿದ್ದರು.
ಅರಣ್ಯ ಹಕ್ಕು ಕಾಯಿದೆ ತಾಲೂಕಾ ಅಧಿಕಾರಿ ಶ್ರೀ ರಾಧಾಕೃಷ್ಣ ಪವರ್ ಅವರು ಉಪಸ್ಥಿತರಿದ್ದರು.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ