May 18, 2024

Bhavana Tv

Its Your Channel

ರಾಜ್ಯ ಮಟ್ಟದ ಅನಿರ್ದಿಷ್ಟ ಪ್ರತಿಭಟನಾ ಧರಣಿ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿಲ್ಲಾ ಹೋರಾಟಗಾರ ರವೀಂದ್ರ ನಾಯ್ಕ ಭಾಗಿ.

ಶಿರಸಿ: ದೆಹಲಿ ರೈತ ಹೋರಟವನ್ನು ಬೆಂಬಲಿಸಿ, ಬೆಂಗಳೂರಿನ ಮರ‍್ಯ ಸರ್ಕಲ್ ಗಾಂಧಿ ಪ್ರತಿಮೆಯ ಎದುರು ಜರುಗುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟ ಪ್ರತಿಭಟನಾ ಧರಣಿ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲಾ ಹೋರಾಟಗಾರರ ವೇದಿಕೆಯ ಪರವಾಗಿ ಧರಣಿಯ ೨ನೇ ದಿನವಾದ ಇಂದು ವೇದಿಕೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕೃಷಿ ಸಂಬoಧಿಸಿ ೪ ಕಾಯಿದೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸುವುದು ವಿದ್ಯುತ್ ಮಸೂದೆ ರದ್ದುಪಡಿಸುವುದು, ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾಯಿದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಜರುಗುತ್ತಿರುವ ಅನಿರ್ದಿಷ್ಟ ಧರಣಿಯ ೨ ನೇ ದಿನವಾದ ಇಂದು ಪ್ರಾಂತ ರೈತ ಮತ್ತುಕೃಷಿಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ಜರುಗಿತ್ತು ಇಂದಿನ ಕಾರ್ಯಕ್ರಮ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಉದ್ಘಾಟಿಸಿದರು.ರೈತ ದುರೀಣರಾದ ಕುರಟ ಶಾಂತದೀರಯ್ಯ, ರಾಮಸ್ವಾಮಿ ಬಸವರಾಜ, ಜನಶಕ್ತಿಕುಮಾರ , ವೀರಸಂಗಯ್ಯ ಭೀಮಯ್ಯ, ಮುಂತಾದವರನೇತೃತ್ವದಲ್ಲಿ ಧರಣಿ ಕಾರ್ಯಕ್ರಮ ಜರುಗಿದವು

error: