April 26, 2024

Bhavana Tv

Its Your Channel

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ನಲ್ಲಿ ಡಾ.ಅಂಬೇಡ್ಕರ್ ರವರ ೧೩೦ ನೇ ಜಯಂತಿ ಆಚರಣೆ

ಹಿರೇಗುತ್ತಿ: ” ಸಂವಿಧಾನ ಶಿಲ್ಪಿ ಶೋಷಿತರ ಧ್ವನಿಯಾಗಿ ಶಿಕ್ಷಣ ಸಮಾನತೆಗೆ ಶ್ರಮಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಆದರ್ಶಗಳು ಸರ್ವಕಾಲಕ್ಕೂ ಸ್ಮರಣೀಯ ವಾದದ್ದು ಎಂದು ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ನುಡಿದರು. ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು ಹಿರೇಗುತ್ತಿ ” ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜನ್ಮದಿನದಂದು ಅವರು ಬದುಕು ವಿಚಾರ ನಮಗೆಲ್ಲ ಪ್ರೇರಣೆ ನೀಡಲಿ” ಎಂದರು.ಕಾರ್ಯಕ್ರಮದಲ್ಲಿ ಬಾಲಚಂದ್ರ ಹೆಗಡೆಕರ್.ನಾಗರಾಜ ನಾಯಕ .ವಿಶ್ವನಾಥ ಬೇವಿನಕಟ್ಟಿ.ಮಹಾದೇವ ಗೌಡ. ಇಂದಿರಾ ನಾಯಕ.ಜಾನಕಿ ಗೊಂಡ.ಶಿಲ್ಪಾ ನಾಯಕ.ದೇವಾಂಗಿನಿ ನಾಯಕ. ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು.

error: