ಹೊನ್ನಾವರ ; ಶಂಭು ಮಂಜುನಾಥ ಹೆಗಡೆ, ಹೆಬೈಲ್ ಕಾಸರಕೋಡ ಇವರು ಮಂಗಳವಾರ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು, ೧೯೩೫ ರಲ್ಲಿ ಜನಿಸಿದ್ದ ದಿವಂಗತರಿಗೆ ೮೬ ವರ್ಷ ವಯಸ್ಸಾಗಿತ್ತು.
ಹೆಬೈಲ್ ಮಂಜುನಾಥ ಹೆಗಡೆ ಅವರ ದ್ವೀತಿಯ ಮಗನಾಗಿದ್ದ ಅವರು, ತಂದೆಯ ನಂತರ ಅಪ್ಸ್ರಕೊಂಡ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ೪೦ ವರ್ಷಗಳಿಗಿಂತ ಹೆಚ್ಚು ಕಾಲ ಶ್ರೀಮಠದ ಎಳ್ಗೆಗಾಗಿ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ದೀರ್ಘ ಕಾಲದಿಂದಲೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾಗಿದ್ದು ದಿ.ಆರ್ ಎಸ್ ಭಾಗ್ವತ್ ಕುಮಟಾ, ದಿ.ಆರ್ ಎನ್ ಶೆಟ್ಟಿಯವರಂಥ ಹಿರಿಯರ ಒಡನಾಡಿಯಾಗಿದ್ದರು. ಉ.ಕ ಜಿಲ್ಲೆಯ ಅನೇಕ ಹಂಚಿನ ಕಾರ್ಖಾನೆಗಳಿಗೆ ಮಣ್ಣು ಪೂರೈಸುವ ಗುತ್ತಿಗೆದಾರರಾಗಿ ಸೇವೆಸಲ್ಲಿಸಿದ್ದ ಶ್ರೀಯುತರು ಜನಾನುರಾಗಿಯಾಗಿಯು ಹೆಸರು ಗಳಿಸಿದ್ದರು. ಮೃತರು ಇಬ್ಬರು ಪುತ್ರಿ ಹಾಗೂ ಒಬ್ಬ ಪುತ್ರರನ್ನು ಹೊಂದಿದ್ದರು. ವಯೋ ಸಹಜ ತೊಂದರೆಗಳಿAದ ಒಳಗಾದ ಅವರನ್ನು ೨ ದಿನಗಳಿಂದ ಆಸ್ಪತ್ರೆಗೆ ದಾಕಲಿಸಲಾಗಿತ್ತು
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ