April 27, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಗುಣವಂತೆಯ ಹಿರಿಯ ಜನಪ್ರಿಯ ಮುಖಂಡ ಶಂಭು ಗೌಡ, ಅಡೀಮನೆ, ಗುಣವಂತೆ ಬುಧವಾರ ಸಂಜೆ ಇಹಲೋಕ ತ್ಯಜಿಸಿದರು.

ಹೊನ್ನಾವರ ; ಗ್ರಾಮೀಣ ಸೊಗಡಿನ ಮಾತಿನ ಮಲ್ಲಾ, ಜನಾನುರಾಗಿ ನಾಯಕ, ಗೇರು ನಿಗಮದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದರು.
ಗೇರು ನಿಗಮ ಮಂಡಳಿಯ ಅಧ್ಯಕ್ಷರಾಗಿ, ತಾಲೂಕು ಪಂ ಅಧ್ಯಕ್ಷರಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಜಿ.ಪಂ.ಸದಸ್ಯರಾಗಿಯು ಸೇವೆ ಸಲ್ಲಿಸಿದ್ದರು.

ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಗುರುವಿನ ಸ್ಥಾನದಲ್ಲಿ, ತಂದೆಯ ಸ್ಥಾನದಲ್ಲಿ ನಿಂತು ಕೈ ಹಿಡಿದು ಸದಾ ಮಾರ್ಗದರ್ಶನ ನೀಡಿ, ನಾನು ಇಂದು ಈ ಸ್ಥಾನದಲ್ಲಿ ನಿಲ್ಲಲು ಕಾರಣರಾದ ಆ ದಿವ್ಯ ಚೇತನವು ಇಂದು ನಮ್ಮನ್ನು ಅಗಲಿರುವುದು ನನಗೆ ಅತೀವ ಸಂಕಟವನ್ನುoಟು ಮಾಡಿದೆ.
ಪ್ರಭು ಶ್ರೀರಾಮನು ಶಂಭು ಗೌಡರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ನನ್ನ ಕ್ಷೇತ್ರದ ಅವರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ಸುನೀಲ್ ನಾಯ್ಕ ಪ್ರಾರ್ಥಿಸಿದ್ದಾರೆ.

error: