April 28, 2024

Bhavana Tv

Its Your Channel

ಶ್ರೀ ಈರಪ್ಪ ತಿಮ್ಮಯ್ಯ ನಾಯ್ಕ ಪಾಪುರಿಮನೆ ನಿಧನ

ಭಟ್ಕಳ ; ಆಸರಕೇರಿ ಭಜನಾ ಮಂಡಳಿಯ ಪ್ರಮುಖರೂ, ಆಸರಕೇರಿಯ ಮೂಲ ನಿವಾಸಿಗಳೂ ಆದ, ಪ್ರಸ್ತುತ ಕಾರ್ಗದ್ದೆಯಲ್ಲಿ ಕುಟುಂಬದೊ0ದಿಗೆ ವಾಸವಾಗಿರುವ ಶ್ರೀ ಈರಪ್ಪ ತಿಮ್ಮಯ್ಯ ನಾಯ್ಕ ಪಾಪುರಿಮನೆ ಇವರು ಅನಾರೋಗ್ಯದ ಕಾರಣ ಬುಧವಾರ ಸಂಜೆ ೬-೪೦ ರ ಸುಮಾರಿಗೆ ದೈವಾದೀನರಾದರು.
ಇವರು ಗುರುಮಠದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಪ್ರತಿ ವಾರದ ಹಾಗೂ ವಿಶೇಷ ದಿನಗಳ ಭಜನಾ ಕಾರ್ಯಕ್ರಮವನ್ನು ಚಾಚು ತಪ್ಪದೇ ನಿರಂತರವಾಗಿ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಅಸೌಖ್ಯದಿಂದಿದ್ದರೂ ಸಹ ದೇವಸ್ಥಾನದ ಭಜನೆಯಲ್ಲಿ ನಿರಂತರವಾಗಿ ಪಾಲ್ಗೊಂಡು ತಮ್ಮ ವಿಶೇಷ ದೈವಭಕ್ತಿಯನ್ನು ಮೆರೆದಿರುವುದು ಎಲ್ಲರಿಗೂ ಪ್ರೇರಣೆಯಾಗಿರುತ್ತದೆ.
ಆಸರಕೇರಿಯ ಭಜನಾ ಮಂಡಳಿಯು ಒಬ್ಬ ಹಿರಿಯ ಪ್ರಮುಖ ಭಜನಾಕಾರರನ್ನು ಕಳೆದುಕೊಂಡಿರುವುದು ನಿಜವಾಗಲೂ ತುಂಬಲಾರದ ನಷ್ಟವಾಗಿದೆ.
ಅವರು ಕೇವಲ ಆಸರಕೇರಿ ಭಜನಾ ಮಂಡಳಿಯ ಆಸ್ತಿಯಾಗಿರದೆ, ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಹಾಗೂ ಇಡೀ ನಮ್ಮ ಭಟ್ಕಳ ನಾಮಧಾರಿ ಸಮಾಜದ ಪ್ರಮುಖ ಆಸ್ತಿಯಾಗಿದ್ದರು ಎನ್ನಲು ನಾವು ಹೆಮ್ಮೆ ಪಡುತ್ತೇವೆ.
ಇವರ ಸಂಪೂರ್ಣ ಜೀವನ ಕಾಲದ ದೈವಭಕ್ತಿಯನ್ನು ಮೆಚ್ಚಿ ಶ್ರೀ ದೇವರು ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ನಮ್ಮ ಆಸರಕೇರಿ ಗ್ರಾಮದ ಎಲ್ಲರ ಪರವಾಗಿ
ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳು ಶ್ರೀ ವೆಂಕಟೇಶ್ವರ ಯುವಕ ಸಂಘ (ರಿ) ಆಸರಕೇರಿ, ಭಟ್ಕಳ ಇವರು ಪ್ರಾರ್ಥಿಸಿದ್ದಾರೆ,

error: