April 27, 2024

Bhavana Tv

Its Your Channel

ಅಂಕೋಲಾದಲ್ಲಿ ದಿನಕರ ಶ್ರೀ ಪ್ರಶಸ್ತಿ ಪ್ರದಾನ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ : ದಿನಕರ ವೇದಿಕೆ ಉತ್ತರಕನ್ನಡರವರ ಆಶ್ರಯದಲ್ಲಿ ಪಟ್ಟಣದ ಪಿ.ಎಮ್.ಜ್ಯೂನಿಯರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ” ದಿನಕರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ” ವನ್ನು ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರರವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.ಜಿಲ್ಲೆಯ ಹಿರಿಯ ಚೇತನ ದಿ.ದಿನಕರ ದೇಸಾಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಪ್ರಥಮ ವರ್ಷದ ” ದಿನಕರ ಶ್ರೀ ಪ್ರಶಸ್ತಿಯನ್ನು ” ಪ್ರಸಿದ್ದ ನಾಟಿ ವೈದ್ಯ ಹನುಮಂತ ಬೊಮ್ಮ ಗೌಡ ಅವರಿಗೆ ಪ್ರದಾನ ಮಾಡಿದರು.ಜಿಲ್ಲೆಯ ದನಿ ಇಲ್ಲದ ಸಮುದಾಯದವರನ್ನು ಅಕ್ಷರವಂತರನ್ನಾಗಿ ಮಾಡುವಲ್ಲಿ ಶ್ರಮಿಸಿದ ದಿನಕರ ದೇಸಾಯಿ ಹೆಸರಲ್ಲಿ ಇಡಲಾದ ಈ ಪ್ರಶಸ್ತಿ ಹಾಲಕ್ಕಿ ಸಮುದಾಯದ ಸಮಾಜಸೇವಕ ಹನುಮಂತ ಗೌಡರಿಗೆ ನೀಡಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಕೆನರಾ ವೆಲಫೇರ ಟ್ರಸ್ಟ್ ನ ಕೆ.ವಿ.ಶೆಟ್ಟಿ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

error: